ಕಲಬುರಗಿ| 4 ಮಕ್ಕಳಿಗೆ ಹುಚ್ಚಿನಾಯಿ ಕಡಿತ; ಲಾಡ್ಲಾಪುರದಲ್ಲಿ ಹೆಚ್ಚಿದ ಆತಂಕ

Date:

Share post:

ಕಲಬುರಗಿ: ಲಾಡ್ಲಾಪುರ ಗ್ರಾಮದಲ್ಲಿ ಬೀದಿ ಹಾಗೂ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು ಮೇಲೆ ಎರಗಿ ಕಚ್ಚಿ ಗಾಯಗೊಳಿಸುತ್ತಿವೆ. ಇದು ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.  ಸೋಮವಾರ ಸಂಜೆ ಶಾಲೆಯಿಂದ ಮರಳಿ ಬರುವಾಗ ಚಿಕ್ಕ ಮಕ್ಕಳ ಮೇಲೆ ಹುಚ್ಚುನಾಯಿಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವುದು ವಾಡಿಯಲ್ಲಿ ವರದಿಯಾಗಿದೆ.

ಬಸ್ ಸ್ಟಾಂಡ್ ಏರಿಯಾದಲ್ಲಿ ಹಿಂಡು ಹಿಂಡಾಗಿ ನಾಯಿಗಳು ತಿರುಗುತ್ತಿದ್ದು ಅದರಲ್ಲಿ ಹುಚ್ಚುನಾಯಿಗಳು ಸೇರಿಕೊಂಡಿದ್ದು, ಮಕ್ಕಳ ಮೇಲೆ ದಾಳಿ ಮಾಡುತ್ತಿವೆ.

ಸೋಮವಾರ 4 ಜನ ಶಾಲಾ ಬಾಲಕಿಯರ ಮೇಲೆ ದಾಳಿ ನಡೆಸಿದ ಹುಚ್ಚುನಾಯಿ ಕೈ ಕಾಲು ಮುಖಕ್ಕೆ ಕಚ್ಚಿ ಗಾಯಗೊಳಿಸಿದೆ. ಸಿಟ್ಟಿಗೆದ್ದ ಗ್ರಾಮಸ್ಥರು ನಾಯಿಯನ್ನು ಹಿಡಿದು ಸಾಯಿಸಲು ಓಡಾಡಿದ್ದು ಕೈಗೆ ಸಿಗದೇ ಪರಾರಿಯಾಗಿದೆ.

ಲಾವಣ್ಯ, ದಿವ್ಯಾ, ಅನಬಿಯ ಎಂಬ ಬಾಲಕಿಯರ ಕೈ, ತೋಳು, ಮುಖ ಮತ್ತು ಬೆನ್ನಿಗೆ ಕಚ್ಚಿ ಗಂಭೀರ ಗಾಯಗೊಳಿಸಿವೆ. ಗಾಯಗೊಂಡ ಬಾಲಕಿಯರನ್ನು ಪೋಷಕರು ಅಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡು ಮರಳಿದ್ದಾರೆ.

ಕಳೆದ ತಿಂಗಳು ಸ್ಥಳೀಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ಶಾಲಾ ಬಾಲಕಿಗೆ ನಾಯಿ ಕಚ್ಚಿದ್ದರಿಂದ ತಿಂಗಳುಗಟ್ಟಲೇ ಶಾಲೆ ತೊರೆದು ಚಿಕಿತ್ಸೆಗಾಗಿ ಅಲೆಯಲಾಗಿತ್ತು.

ಈಚೆಗೆ ಬೇರೆ ಕಡೆಯಿಂದ ಬಂದಿರುವ ನಾಯಿಗಳು ಲಾಡ್ಲಾಪುರ ಗ್ರಾಮ ಹೊಕ್ಕಿವೆ. ಅದರಲ್ಲಿ ಕೆಲ ನಾಯಿಗಳಿಗೆ ಹುಚ್ಚುರೋಗ ತಗುಲಿದ್ದು ಗ್ರಾಮಸ್ಥರು ಭಯದಲ್ಲೇ ತಿರುಗುವಂತಾಗಿದೆ. ನಾಯಿಗಳು ಕಚ್ಚಲು ಬೈಕ್ ಮತ್ತಿತರರು ವಾಹನಗಳ ಬೆನ್ನಟ್ಟುತ್ತಿದ್ದು, ಬೈಕ್ ಸವಾರರು ನೆಲಕ್ಕುರುಳಿದ ಘಟನೆಗಳು ಜರುಗಿವೆ.

Share post:

spot_imgspot_img

Popular

More like this
Related

ಕಲಬುರಗಿಯಲ್ಲಿ ಜೋಯಾಲುಕ್ಕಾಸ್‌ನ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’

ಕಲಬುರಗಿ: ಜಗತ್ತಿನ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್ ಜೋಯಾಲುಕ್ಕಾಸ್, ಕಲಬುರಗಿ ನಗರದ ತನ್ನ...

ಕಲಬುರಗಿ| ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಿ: ರಾಜಕುಮಾರ್ ಪಾಟೀಲ್ ತೆಲ್ಕೂರ್

ಕಲಬುರಗಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ರೂಪಾಯಿ ಹಗರಣಕ್ಕೆ...

Kalaburagi| ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್ ಪಾಟೀಲ್ ರಾಜೀನಾಮೆ 

ಕಲಬುರಗಿ: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ...

ಕಲಬುರಗಿ: 9,950ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ: ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ...