ಕಲಬುರಗಿ: ನಗರದಲ್ಲಿ ನಿರ್ಮಿಸುತ್ತಿರುವ ಡಾ. ಬಾಬು ಜಗಜೀವನ ರಾಮ ಅವರ ಬೃಹತ್ ಭವನಕ್ಕೆ ಹೆಚ್ಚುವರಿಯಾಗಿ ಅನುದಾನ ನೀಡಿ ಭವನ ಕಟ್ಟಡ ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜಿಲ್ಲಾ ಮಾದಿಗರ ಸಮಾಜದ ಅಭಿವೃದ್ಧಿ ಒಕ್ಕೂಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು 2025ರ ಏಪ್ರಿಲ್ 3 ರಂದು ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದು ಇನ್ನೂ 6.50 ಕೋಟಿ ಕಟ್ಟಡ ಕಾಮಗಾರಿಗೆ ಅವಶ್ಯಕತೆ ಇದೆ ಎಂದು ಪ್ರಸ್ತಾವನೆ ಸಲ್ಲಿಸಿದ್ದಾರೆ, ಅದಲ್ಲದೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಹ ಮಂಜುರಾತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಹೆಚ್ಚುವರಿ ಹಣ ನಮ್ಮಲ್ಲಿ ಇಲ್ಲ ಎಂದು ಹೇಳಿ, ಸ್ಥಳೀಯರಿಂದ ಹಣ ಸಂಗ್ರಹಿಸಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಹಿಂಬರಹ ಕಳಿಸಿರುತ್ತಾರೆ. ಹಾಗಾಗಿ ಮಂಜೂರಾಗಬೇಕಿರುವ ಹಣವನ್ನು ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.
ಇದೇ ವೇಳೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕಟ್ಟಡ ಕಾಮಗಾರಿಯನ್ನು 4 ರಿಂದ 5 ತಿಂಗಳ ಒಳಗಾಗಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಲಿಂಗರಾಜ ತಾರಫೈಲ, ಮಲ್ಲಿಕಾರ್ಜುನ ಜೀನಕೇರಿ, ರಾಜು ವಾಡೇಕರ, ದಶರಥ ಕಲಗುರ್ತಿ, ಪರಮೇಶ್ವರ ಖಾನಾಪೂರ, ಮಲ್ಲಿಕಾರ್ಜುನ ದೊಡ್ಡಮನಿ, ರಾಜು ಕಟ್ಟಿಮನಿ, ರಮೇಶ ವಾಡೇಕರ, ಬಾಬು ಸುಂಠಾಣ, ಬಂಡೇಶ ರತ್ನಡಗಿ, ಶ್ರೀಮಂತ ಭಂಡಾರ, ಶಿವಪುತ್ರ ನಾಗನಳ್ಳಿ, ಮಲ್ಲಿಕಾರ್ಜುನ ಸರಡಗಿ, ಸಚಿನ ಕಟ್ಟಿಮನಿ, ರಂಜೀತ ಮೂಲಿಮನಿ, ಗುಂಡು ಸಂಗವಾರ, ಚಂದ್ರಕಾoತ ನಾಟೀಕರ, ಪ್ರದೀಪ ಬಾಚನಾಳಕರ್, ಶರಣು ಸಗರಕರ, ಕಾಶಿನಾಥ ಹಾದಿಮನಿ, ಪ್ರದೀಪ ಭಾವೆ, ವಿನೇಶ ಸೇರಿದಂತೆ ಹಲವರಿದ್ದರು.


