ಕಲಬುರಗಿ| ದೀಪಗಳಿಂದ ಝಗಮಗಿಸಿದ ಕನ್ನಡ ಭವನ; ಜಿಲ್ಲಾ ಕಸಾಪದಿಂದ ಕನ್ನಡ ದೀಪೋತ್ಸವ

Date:

Share post:

ಕಲಬುರಗಿ: ದೀಪದಿಂದ ದೀಪ ಹಚ್ಚಿ ಮನವ ಬೆಳಗಿ, ಕತ್ತಲೆ ಅಳಿಸಿ ಬೆಳಕು ಹೊತ್ತಿಸಿ ಎಂಬ ಕವಿವಾಣಿಯಂತೆ ಇಲ್ಲಿಯ ಕನ್ನಡ ಭವನ ದೀಪೋತ್ಸವ ಬೆಳಕಿನಲ್ಲಿ ಇಡೀ ಕನ್ನಡ ಭವನ ಝಗಮಗಿಸುವಂತಿತ್ತು. ಕನ್ನಡ ಭವನದ ಅಂಗಳದಲ್ಲಿ ಕತ್ತಲೆ ಸೀಳಿ ಹೊತ್ತಿದ ದೀಪಗಳು ಬಣ್ಣಗಳ ಚಿತ್ತಾರ ಮೂಡಿಸಿದವು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಮಂಗಳವಾರ ಏರ್ಪಡಿಸಿದ ಕನ್ನಡ ದೀಪೋತ್ಸವ ಕಾರ್ಯಕ್ರಮ ಭಾಗವಹಿಸಿದ್ದವರ ಮನಸೂರೆಗೊಂಡಿತು.

ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸ್ತಿçÃರೋಗ ತಜ್ಞೆ ಡಾ. ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ, ನಮ್ಮ ಮನ ಬೆಳಕಿನ ಹೊನಲಲ್ಲಿ ಕಂಗೊಳಿಸಲಿ. ಬದುಕು ಹಸನಾಗಲಿ. ಕನ್ನಡ ನಿತ್ಯೋತ್ಸವವಾಗಲಿ. ಕನ್ನಡ ಕಟ್ಟುವ ಕಾರ್ಯದ ಮುಂಚೂಣಿಯಲ್ಲಿ ಪರಿಷತ್ತು ಕಾರ್ಯನಿರ್ವಹಿಸುತ್ತಿದೆ. ಕನ್ನಡವೇ ಸತ್ಯ- ಕನ್ನಡವೇ ನಿತ್ಯ ನಮ್ಮ ಬದುಕಿನ ಮಂತ್ರವಾಗಬೇಕಾಗಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಿಶಿಷ್ಟ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಪರಿಷತ್ತು ಜನರ ವಿಶೇಷ ಗಮ,ನ ಸೆಳೆಯುತ್ತಿದೆ. ಕನ್ನಡತೋತ್ಸವ ಪ್ರತಿ ನಿತ್ಯವೂ ಆಚರಿಸುತ್ತಿದ್ದೇವೆ ಎಂದ ಅವರು, ಕನ್ನಡ ನಮ್ಮ ಬದುಕಾಗಬೇಕು-ಉಸಿರಾಗಬೇಕಾಗಿದೆ ಎಂದರು.

ಪಾಲಿಕೆಯ ಉಪ ಮಹಾಪೌರರಾದ ತೃಪ್ತಿ ಲಾಖೆ, ಸಮಾಜ ಸೇವಕಿ ಕ್ಷಮಾ ಶಿವರಾಜ ಇಂಗಿನಶೆಟ್ಟಿ ಮಾತನಾಡಿದರು. ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ ಮಾತನಾಡಿದರು.

ಪ್ರಮುಖರಾದ ಕಲ್ಯಾಣಕುಮಾರ ಶೀಲವಂತ, ಧರ್ಮರಾಜ ಜವಳಿ, ರಮೇಶ ಡಿ ಬಡಿಗೇರ, ದಿನೇಶ ಮದಕರಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಎಂ.ಎನ್. ಸುಗಂಧಿ, ಚಂದ್ರಕಾAತ ಸೂರನ್, ಹೆಚ್.ಎಸ್. ಬರಗಾಲಿ, ಶಿವಕುಮಾರ ವರ್ಮಾ, ಜಿಲ್ಲಾ ಕಸಾಪ ದ ಮಹಿಳಾ ಪ್ರತಿನಿಧಿಗಳಾದ ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ಜಯಶ್ರೀ ಜಮಾದಾರ, ವೆಂಕುಬಾಯಿ ರಜಪೂತ, ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೇಣುಕಾ ಡಾಂಗೆ, ಪೂಜಾ ಬಂಕಲಗಿ, ವಿಶಾಲಕ್ಷಿ ಮಾಯಣ್ಣವರ್, ಕವಿತ ಕವಳೆ, ಭಾಗ್ಯಶ್ರೀ ಮರಗೋಳ, ರವಿಕುಮಾರ ಶಹಾಪೂರಕರ್, ಗೀತಾ ಪಾಟೀಲ, ಶ್ವೇತಾ ಶೆಟ್ಟಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಮಾನವ ಹಕ್ಕುಗಳ ಸಂರಕ್ಷಣೆ ಅಗತ್ಯ: ಕರುಣಾ ಪಾಟೀಲ

ಕಲಬುರಗಿ: ಇಂದಿನ ಆಧುನಿಕ ಯುಗದಲ್ಲಿ ಜನರು ಯಂತ್ರಗಳಿಗೆ ತಮ್ಮ ಸಮಯ ಮೀಸಲಿಟ್ಟಿದ್ದಾರೆ,...

ಕಲಬುರಗಿ| ಭೀಕರ ಅಪಘಾತ; ಸ್ಥಳದಲ್ಲೇ ಮೂವರ ಸಾವು; ಮೂವರು ಗಂಭೀರ

ಕಲಬುರಗಿ: ಜೀಪ್ ಹಾಗೂ ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ...

ಕಲಬುರಗಿ| ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದು, ಸೂರ್ಯಕಾಂತಿ, ಸೋಯಾಬಿನ್ ಖರೀದಿ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಪ್ರಸಕ್ತ 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನ...

ಕಲಬುರಗಿ| ಅಂಬೇಡ್ಕರ್ ರವರನ್ನು ನಿಜವಾಗಿಯೂ ಗೌರವಿಸಿದ್ದು ಬಿಜೆಪಿ, ಕಾಂಗ್ರೆಸ್ ಅಲ್ಲ: ಅಶೋಕ್ ಬಗಲಿ

ಕಲಬುರಗಿ: ಆಧುನಿಕ ಭಾರತದ ನಿರ್ಮಾತೃ, ಸಂವಿಧಾನ ಶಿಲ್ಪ ಭಾರತರತ್ನ ಬಾಬಾಸಾಹೇಬ್ ಅಂಬೇಡ್ಕರ್...