ಕಲಬುರಗಿ| ಕಟ್ಟಿಸಂಗಾವಿ ಬೃಹತ್ ಸೇತುವೆ ಮೇಲಿಂದ ಉಕ್ಕಿದ ನೀರು; ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್!

Date:

Share post:

ಕಲಬುರಗಿ: ಮಹಾರಾಷ್ಟ್ರದ ವೀರ್, ಉಜನಿ, ಸಿನಾ ಜಲಾಶಯ ಹಾಗೂ ಬೋರಿ ನದಿಯಿಂದ 3.50 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿಬಿಟ್ಟದರಿಂದ ಭೀಮಾ ನದಿಯ ಪ್ರವಾಹದ ಅರ್ಭಟ ರಾತ್ರೋ ರಾತ್ರಿ ಹೆಚ್ಚಾಗಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿಗೆ ಸಮರ್ಕಿಸುವ ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.

ಶನಿವಾರ ರಾತ್ರಿ ಸೇತುವೆ ಸಮೀಪ ನೀರು ಹರಿಯುತ್ತಿತ್ತು, ಕ್ರಮೇಣ ಹೆಚ್ಚಿದ ಪ್ರವಾಹದಿಂದ ರವಿವಾರ ಬೆಳಗಿನ ಜಾವ ನೋಡಿದರೆ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದ ಬೀದರ್ – ಬೆಂಗಳೂರು, ಶ್ರೀ ರಂಗಪಟ್ಟಣಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.

ನೀರಿನ ರಭಸವನ್ನು ನೋಡಿಕೊಂಡು ಮುಂಜಾಗೃತಾ ಅಂಗವಾಗಿ ಈ ಕಟ್ಟಿಸಂಗಾವಿ ಬ್ರಿಡ್ಜ್ ಮೇಲೆ ಬೃಹತ್ ಗಾತ್ರದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಇದೀಗ ಸೇತುವೆಯೇ ಮುಳುಗಿದ್ದರಿಂದ ತುರ್ತು ವಾಹನ ಆಂಬ್ಯುಲೆನ್ಸ್ ಸೇರಿದಂತೆ ಯಾವುದೇ ವಾಹನಗಳ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ಹಾಗಾಗಿ ಈ ಮಾರ್ಗದಲ್ಲಿ ತೆರಳುವ ದೂರದ ಪ್ರಯಾಣಿಕರಿಗೆ ತುಂಬ ಕಷ್ಟ ಎದುರಾಗಿದೆ.

ರಸ್ತೆ ಪಕ್ಕದಲ್ಲೇ ನಿಂತ ವಾಹನಗಳು:

ಸೇತುವೆ ಮುಳುಗುವ ಹಂತದಲ್ಲೇ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿದ್ದರಿಂದ ಕಲಬುರಗಿಯಿಂದ ಜೇವರ್ಗಿ ಹಾಗೂ ಜೇವರ್ಗಿಯಿಂದ ಕಲಬುರ್ಗಿಗೆ ತೆರಳುವ ವಾಹನಗಳು ಸಾಲು ಸಾಲಾಗಿ ನಿಂತಿವೆ. ಟ್ರಕ್, ಕ್ಯಾಂಟರ್, ಬಸ್, ಕಾರು, ಗೂಡ್ಸ್ ವಾಹನಗಳು ಸೇರಿದಂತೆ ಹಲವು ವಾಹನಗಳು ನಿಂತ ಜಾಗದಲ್ಲೇ ನಿಂತಿವೆ. ಇದರಿಂದ ವಾಹನ ಚಾಲಕರಿಗೆ ಊಟ, ನೀರು ಮತ್ತಿತರ ಸೌಲಭ್ಯಗಳಿಂದ ಬಳಲುತ್ತಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ವಿಕಲಚೇತನ ಫಲಾನುಭವಿಗಳಿಗೆ ವಿವಿಧ ಬಗೆಯ ಸುಮಾರು 62 ಲಕ್ಷ ರೂ. ಮೊತ್ತದ ಸಾಧನ ಸಲಕರಣೆಗಳ ವಿತರಣೆ

ಕಲಬುರಗಿ: ಹೌಸಿಂಗ್ ಆಂಡ್ ಅರ್ಬನ್ ಡೆವಲಪ್‍ಮೆಂಟ್ ಕಾರ್ಪೋರೇಶನ್ ಲಿಮಿಟೆಡ್ (HUDCO) ಸಂಸ್ಥೆಯ...

ಕಲಬುರಗಿ| ಲಾರಿ – ಬೈಕ್ ಢಿಕ್ಕಿ; ಬೈಕ್ ಸವಾರ ಮೃತ್ಯು; ಇನ್ನೋರ್ವ ಗಂಭೀರ ಗಾಯ

ಕಲಬುರಗಿ: ಲಾರಿ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್...

ಕಲಬುರಗಿ| ರಾಮನವಮಿ ಆಚರಣೆ; ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಆದೇಶ

ಕಲಬುರಗಿ: ರಾಮ ನವಮಿ ಆಚರಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಗಳಾದ...

ಕಲಬುರಗಿ| ಬೇಸಿಗೆಯ ಸವಾಲುಗಳ ಎದುರಿಸಲು ಸಿದ್ಧ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್

ಕಲಬುರಗಿ: ಕಲಬುರಗಿ ಜಿಲ್ಲಾಡಳಿತವು ಬೇಸಿಗೆಯ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸನ್ನದ್ಧವಾಗಿದ್ದು, ಸಾರ್ವಜನಿಕರು...