ಕಲಬುರಗಿ| ಖ್ಯಾತ ಚಿತ್ರ ಕಲಾವಿದರಿಗೆ ಅಭಿನಂದನಾ ಸಮಾರಂಭ 

Date:

Share post:

ಕಲಬುರಗಿ: ನಗರದಲ್ಲಿ ಮುಹಿಬನ್ನೆ ಉರ್ದು ಆಯೋಜಿಸಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿ ರಾಜ್ಯ ವಾರ್ಷಿಕ ಪ್ರಶಸ್ತಿ ಪುರಸ್ಕೃತ ರೆಹಮಾನ್ ಪಟೇಲ್ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಅಯಾಜುದ್ದೀನ್ ಪಟೇಲ್ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಈ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಫರಾನ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಅಬ್ದುಲ್ ಹಮೀದ್ ಮಾತನಾಡಿ, ಇಂದಿನ ಸಮಾಜದಲ್ಲಿ ಕಲಾವಿದರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ಕಲಾವಿದರಿಂದ ಮುಂದಿನ ಪೀಳಿಗೆಗೆ ಇತಿಹಾಸ, ಕಲೆ, ಸಾಂಸ್ಕೃತಿಕ ಸೇರಿದಂತೆ ಇತರೆ ವಿಷಯಗಳನ್ನು ಪರಿಚಯಿಸುವ ದೊಡ್ಡ ಕಾರ್ಯ ಆಗಲಿದೆ ಎಂದರು.

ಮುಹಿಬನ್ನೆ ಉರ್ದು ಅಧ್ಯಕ್ಷ ಡಾ.ಫಹೀಮುದ್ದೀನ್ ಪೀರಜಾದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ ಅನೀಸ್ ಸಿದ್ದಿಕಿ, ಸದಸ್ಯ ಖಾಜಾ ಪಾಷಾ ಇನಾಮದಾರ ವೇದಿಕೆ ಹಂಚಿಕೊಂಡರು. ಸೈಯದ್ ತಯಾಬ್ ಅಲಿ, ಗಜಾನ್‌ಫರ್ ಇಕ್ಬಾಲ್, ರಿಜ್ವಾನ್ ಉರ್ ರೆಹಮಾನ್, ಮುಜೀಬ್ ಅಲಿ ಖಾನ್, ಯೂಸುಫ್, ಮುಬೀನ್ ಝಕಾಮ್ ಸೇರಿದಂತೆ ಮುಂತಾದ ಉರ್ದು ಬರಹಗಾರರು ಮತ್ತು ಬುದ್ಧಿಜೀವಿಗಳು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ | ಭೂ ನ್ಯಾಯಮಂಡಳಿಯ ಅಧಿಕಾರೇತರ ಸದಸ್ಯರಿಗೆ ಸನ್ಮಾನ

ಕಲಬುರಗಿ; ತಾಲ್ಲೂಕು ಭೂ ನ್ಯಾಯಮಂಡಳಿಯ ಅಧ್ಯಕ್ಷರಾಗಿ ವಿಭಾಗದ ಸಹಾಯಕ ಆಯುಕ್ತರು, ಅಧಿಕಾರೇತರ...

ಕಲಬುರಗಿ| ಕಿಣ್ಣಿಸುಲ್ತಾನ ಗ್ರಾಪಂ ಉಪಾಧ್ಯಕ್ಷರಾಗಿ ಮಥುರಾಬಾಯಿ ಅವಿರೋಧ ಆಯ್ಕೆ

ಕಲಬುರಗಿ: ಆಳಂದ ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಸ್ಸಿ ಮೀಸಲು...

ಕಲಬುರಗಿ| ಕಳಪೆ ಬೀಜ, ನಕಲಿ ರಸಗೊಬ್ಬರ ಮಾರಾಟಗಾರರ ವಿರುದ್ಧ ಕೇಸ್: ಜಿಲ್ಲಾಧಿಕಾರಿ

ಕಲಬುರಗಿ: ಕಳಪೆ ಬೀಜ ಹಾಗೂ ನಕಲಿ ರಸಗೊಬ್ಬರ ಮಾರಾಟ ಕುರಿತಂತೆ ರೈತರಿಂದ...