ಕಲಬುರಗಿ: ನಗರದ ಐವಾನ್-ಏ-ಶಾಹಿನಲ್ಲಿರುವ ವಿಜ್ಜು ವುಮೇನ್ಸ್ ಕಾಲೇಜು ಹತ್ತಿರ ಜಾಜಿ ಕಾಂಪ್ಲೇಕ್ಸ್ನಲ್ಲಿ ನೂತನವಾಗಿ ಆರಂಭಗೊಳ್ಳಲಿರುವನಮ್ಮ ಕರ್ನಾಟಕ ಸೇನೆಯ ಕಚೇರಿಯನ್ನು ಮಾಜಿ ಮೇಯರ್ ವಿಶಾಲ ದರ್ಗಿ ಉದ್ಘಾಟಿಸಿದರು.
ಜಿಲ್ಲೆಯ ಜಿಲ್ಲಾಧ್ಯಕ್ಷ ಸುಧೀಂದ್ರ ಎಂ.ಈಜೇರಿ ಮಾತನಾಡಿ, ನಮ್ಮ ಹೆಮ್ಮೆಯ ರಾಜ್ಯಾಧ್ಯಕ್ಷರಾದ ಬಸವರಾಜ್ ಎಂ ಪಡಕೋಟೆ ಅವರ ಆದೇಶದಂತೆ ಅವರು ನಡೆದ ಬಂದ ಹಾದಿಯನ್ನು ಅನುಸರಿಸುತ್ತ ನಮ್ಮಸಂಘಟನೆಯ ಸಿದ್ಧಾಂತಗಳು ಕಾರ್ಯ ಚಟುವಟಿಕೆಗಳು ಹೋರಾಟದ ಚಾಕಚ್ಯತೆಯ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡು ಮಾತನಾಡಿದ ಅವರು ತಾಯಿ ಕನ್ನಡಾಂಬೆಯ ನಾಡು,ನುಡಿಗಾಗಿ’ ನಮ್ಮಉಸಿರಿರುವರೆಗೂ ಪ್ರಯತ್ನ ಬಿಡುವುದು ಬೇಡ ಎಂಬ ಗಟ್ಟಿ ನಿರ್ಧಾರದ ಮಾತನಾಡಿದರು.
ಮುಂಬರುವ ದಿನಮಾನಗಳಲ್ಲಿ ಕಲಬುರ್ಗಿ ಜಿಲ್ಲೆಯ ಸಮಸ್ತ ಅಭಿವೃದ್ಧಿಗೆ ನಾವೆಲ್ಲ ಒಗ್ಗಟ್ಟಿನ ಭಲ ತೋರಿಸೋಣ ಜೊತೆಗೆ ನಗರ ಘಟಕ ಅಧ್ಯಕ್ಷರು ಒಳಗೊಂಡು ಸಂಪೂರ್ಣ ಜಿಲ್ಲಾ ಹಾಗೂ ತಾಲೂಕು ಕುಟುಂಬದ ಸದಸ್ಯರೊಂದಿಗೆ ಬದಲಾವಣೆಯ ಭವಿಷ್ಯ ಕಂಡುಕೊಳ್ಳೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಬಿಜೆಪಿ ಮುಖಂಡ ರಾಜು ಆರ್ ವಾಡೆಕರ್, ಡಾ. ಫಾರೂಕ್ ಮಣೂರ, ಮಾದಿಗ ಸಮಾಜದ ಹಿರಿಯ ಮುಖಂಡ ದಶರಥ ಕಲಗುರ್ತಿ, ನಗರ ಘಟಕ ಅಧ್ಯಕ್ಷ ಸುರೇಶ್ ಜಿ ಹೊಸಮನಿ ಹಾಗೂನಗರ ಯುವ ಘಟಕ ಅಧ್ಯಕ್ಷ ಸಾಗರ್ ಡಿ ಅಭಿಷಾಳ ಸೇರಿದಂತೆ ಜಿಲ್ಲೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಇದ್ದರು.


