ಕಲಬುರಗಿ: 21 ನೆಯ ದಿನದ ಗಣೇಶ ವಿಸರ್ಜನೆ ಪ್ರಯುಕ್ತ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರ ನೇತೃತ್ವದಲ್ಲಿ ನಗರದಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಯಿತು.
ಪಥ ಸಂಚಲನವು ಕಲಬುರಗಿ ನಗರದ ಹಿಂದೂ ಮಹಾ ಗಣಪತಿ ಸ್ಥಾಪನೆಯಾದ ಸ್ಥಳದಿಂದ ಪ್ರಾರಂಭವಾಗಿ ಪ್ರಕಾಶ್ ಏಷಿಯನ್ ಮಾಲ್, ಚೌಕ್ ಸರ್ಕಲ್, ಮಾರ್ಕೆಟ್ ಮಸ್ಜಿದ್, ಚಪ್ಪಲ್ ಬಜಾರ್, ಮೈಬಾಸ್ ಮಸ್ಜಿದ್, ಬ್ರಹ್ಮಪುರ ಪೊಲೀಸ್ ಠಾಣೆ, ಜಗತ್ ವೃತ್ತ, ಸಿಟಿ ಬಸ್ ಸ್ಟ್ಯಾಂಡ್, ಹಿಂದೂ ಮಹಾ ಗಣಪತಿ ಸ್ಥಾಪನೆಯಾದ ಸ್ಥಳಕ್ಕೆ ಬಂದು ಮುಕ್ತಾಯಗೊಂಡಿದೆ.
ಪಥ ಸಂಚಲನದಲ್ಲಿ ಕಲಬುರಗಿ ನಗರದ ಸಿ.ಎ.ಆರ್ ಘಟಕ, ಸಿವಿಲ್ ಸಿಬ್ಬಂದಿ ಹಾಗೂ RAF( Rapid Action Force) ಸೇರಿದಂತೆ 350ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಭಾಗವಹಿಸಿದ್ದರು.


