ಕಲಬುರಗಿ: (ಲಿಂ. ಗುರುಬಸಪ್ಪ ಸಜ್ಜನಶೆಟ್ಟಿ ವೇದಿಕೆ ) ಅನೇಕ ಸಂಘರ್ಷಗಳನ್ನು ಎದುರಿಸಿದ ಕಲಬುರಗಿ ಜಿಲ್ಲೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಂಸ್ಕೃತಿಕ ವಿಶೇಷ ನೆಲೆಯಾಗಿದೆ. ಇಡೀ ದೇಶಕ್ಕೆ ಸಾಂಸ್ಕೃತಿಕ ಕೊಡುಗೆ ನೀಡಿದ್ದು ಅನನ್ಯವಾಗಿದೆ ಎಂದು ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಡಾ. ಚನ್ನಪ್ಪ ಕಟ್ಟಿ ಹೇಳಿದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದಲ್ಲಿ ಜರುಗಿದ ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪದಕಾರರು, ತತ್ವಪದಕಾರರು ಈ ನಾಡು ದೇಶಕ್ಕೆ ಬಹು ಮೌಲಿಕ ಕೊಡುಗೆ ನೀಡಿದೆ. ಸಾಹಿತ್ಯ ಉತ್ಪನ್ನವಾಗದೆ ಪ್ರಕ್ರಿಯೆ ರೀತಿಯಲ್ಲಿ ಸಾಹಿತ್ಯ ರಚಿಸಬೇಕಾಗಿದೆ. ಓದು ನಮಗೆ ಸ್ವಾತಂತ್ರ್ಯ ನೀಡಿದ್ದು ನಮ್ಮನ್ನು ಬಿಡುಗಡೆಗೊಳಿಸುತ್ತದೆ. ಆದರೆ ವಿಮರ್ಶೆ ಅದಕ್ಕೆ ಪೂರಕ ಶಕ್ತಿ ನೀಡುತ್ತದೆ. ವಿಮರ್ಶಕನು ವಿಶ್ಲೇಷಣೆ ಮಾಡುವ ಜವಬ್ದಾರಿ ಹೆಚ್ಚಿದೆ. ಪರಂಪರೆಯಿoದ ಹೊಸ ವ್ಯವಸ್ಥೆಯನ್ನು ಕಟ್ಟಬೇಕು. ಇಂಥ ಹೊಸ ಸಿದ್ದಾಮತ ಇಂದಿನ ಯುವ ಬರಹಗಾರರು ಅನುಸರಿಸಬೇಕೆಂದರು.
ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುಜರಗಿ ತನ್ನದೇ ಆದ ವಿಶಿಷ್ಟ ಇತಿಹಾಸ-ಪರಂಪರೆ ಹೊಂದಿದೆ ಎಂದು ವಿಮರ್ಶಕ-ಸಮ್ಮೇಳನಾಧ್ಯಕ್ಷ ಡಾ. ಶ್ರೀಶೈಲ ನಾಗರಾಳ ಹೇಳಿದರು.
ಕಲಬುರಗಿ ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೌರ್ಯ, ಶಾತವಾಹನ, ಕಲ್ಯಾಣ ಚಾಲೂಕ್ಯರು, ಬಹಮನಿ ಸುಲ್ತಾನರು, ಅದಿಲ್ ಶಾಹಿ ಹಾಗೂ ನಿಜಾಮ ಅರಸರು ಆಳ್ವಿಕೆ ನಡೆಸಿದ್ದಾರೆ. ಆಯಾ ಕಾಲಘಟ್ಟದಲ್ಲಿ ಕಲೆ, ಸಾಹಿತ್ಯ, ಧಮ್, ಭಾಷೆ, ಸಂಸ್ಕೃತಿ ಬೆಳೆದು ಬಂದಿದೆ ಎಂದರು. ಶಿವಕೋಟ್ಯಾಚಾರ್ಯರ ವಡ್ಡಾರಾಧನೆ, ನೃಪತುಂಗನ ಕವಿರಾಜ ಮಾರ್ಗ, ವಚನ ಸಾಹಿತ್ಯ, ತತ್ವಪದ ಸಾಹಿತ್ಯ, ಸೂಫಿ ಸಂತರ ತವರೂರು ಇದಾಗಿದೆ ಎಂದು ಅಭಿಪ್ರಾಯಪಟ್ಟರು.
ಆಧುನಿಕ ಸಂದರ್ಭದಲ್ಲೂ ಇಲ್ಲಿನ ಕವಿ, ಸಾಹಿತಿ, ಲೇಖಕರು,. ರಂಗಭೂಮಿ ಕಲಾವಿದರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಇದೆಲ್ಲದಕ್ಕೂ ಮಿಗಿಲಾಗಿ ಈ ನೆಲ ಸೌಹಾರ್ದತೆಯ ನೆಲೆವನೆಯಾಗಿದೆ ಎಂದರು ಹೇಳಿದರು.

ಕಲಬುರಗಿ ಶಿಕ್ಷಣ ಕಾಶಿ, ಪುಸ್ತಕ ಕಾಶಿಯೂ ಅಗಿದ್ದು, ಈ ನೆಲದಲ್ಲಿ ಈವರೆಗೆ ನಾಲ್ಕು ಅಖಿಲ ಭಾರತ ಸಾಹಿತ್ಯ ಸಮ್ಮೇಳನ, 21 ಜಿಲ್ಲಾ ಸಮ್ಮೇಳನ, 9 ತಾಲೂಕು ಸಮ್ಮೇಳನ ಜರುಗಿವೆ. ಆ ಮೂಲಕ ಕಲಬುರಗಿ ಭೌತಿಕವಾಗಿ ಮತ್ತು ಬೌಧ್ಧಿಕವಾಗಿ ಸಾಕಷ್ಟು ಪ್ರಗತಿ ಕಂಡಿದೆ ಎಂದರು. ಆದರೆ ಶಾಲಾ ಕಾಲೇಜು ಹಂತದ ಪಠ್ಯ ಪುಸ್ತಕಗಳಲ್ಲಿ ಈ ಭಾಗದ ಲೇಖಕರ, ಕವಿಗಳ ಜೀವನ ಚರಿತ್ರೆಯನ್ನು ಸೇರಿಸಬೇಕು ಎಂದು ಆಗ್ರಹಿಸಿದರು.
ಜಾನಪದ ಸಮಾಜೋ ಸಂಸ್ಕೃತಿ ಕೃತಿ ಬಿಡುಗಡೆ ಮಾಡಿದ ಗುಲಬರ್ಗಾ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಹೆಚ್.ಟಿ. ಪೋತೆ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಾಂಸ್ಕೃತಿಕವಾಗಿ ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಸರಕರಕ್ಕೆ ಮನವಿ ಮಾಡಿದರೂ ಬೇಡಿಕೆ ಈಡೇರಿಲ್ಲ. ಸೃಜನಶೀಲ ಕತೆಗೆ ಸಿಕ್ಕ ಗೌರವ ಜನಪದ ಸಾಹಿತ್ಯಕ್ಕೆ ಸಿಗುತ್ತಿಲ್ಲ. ಆನಪದ ಸಾಹಿತ್ಯ ನಿರ್ಲಕ್ಷö್ಯಕ್ಕೊಳಗಾಗಿದೆ. ನಮ್ಮ ಮಕ್ಕಳಲ್ಲಿ ಜನಪದ ಕಲೆ ಸಂಸ್ಕೃತಿ ಉಳಿಸಿ ಬೆಳೆಸಬೇಕಾದರೆ ಜಾಗೃತಿ ಮೂಡಸಬೇಕು. ಮಡಿವಂತಿಕೆಯಿoದ ಹೊರ ಬಂದು ಸಂಸ್ಕೃತಿಯನ್ನು ಗೌರವಿಸಬೇಕು ಎಂದರು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಭಾವಂತರಿಗೆ ವೇದಿಕೆ ಒದಗಿಸಿಕೊಡುವ ಕಾರ್ಯ ಮ,ಆಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸಮ್ಮೇಳನದ ನೇತೃತ್ವ ವಹಿಸಿದ್ದರು. ತಾಲೂಕಾಧ್ಯಕ್ಷೆ ಶಿವಲೀಲಾ ಕಲಗುರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತ್ಯ ಪ್ರೇರಕರಾದ ಲಕ್ಷ್ಮೀ ದತ್ತಾತ್ರೇಯ ಪಾಟೀಲ ರೇವೂರ ಅವರು ಕವಿ ಹೂವಾನಂದ ಸಲಗಾರ ಅವರ ಜಗದ ಜನಕ ಕೃತಿ ಬಿಡುಗಡೆ ಮಾಡಿದರು. ಸಮ್ಮೇಳನದ ಸ್ಮರಣ ಸಂಚಿಕೆ ಕಾವ್ಯ ಕಳಸ ಕೃತಿಯನ್ನು ಸಾಹಿತ್ಯ ಪ್ರೇರಕಿ ಜಯಶ್ರೀ ಬಸವರಾಜ ಮತ್ತಿಮೂಡ ಜನಾರ್ಪಣೆಗೊಳಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಪ್ರಮೀಳಾ ಜಾನಪ್ಪಗೌಡ ಚಿಂಚೋಳಿ ಮಾತನಾಡಿದರು. ಸ್ವಾಗತ ಸಮಿತಿಯ ದಯಾನಂದ ದೇವರಮನಿ, ವಿಶ್ವನಾಥ ಹುಲಿ, ಫಾರೂಕ ಅಹ್ಮದ್ ಮಣೂರ, ವಿಶಾಲಾಕ್ಷಿ ಮಾಯನ್ಣವರ್, ಮಲ್ಲಿಕಾರ್ಜುನ ಇಬ್ರಾಹಿಂಪುರ, ಕುಪೇಂದ್ರ ಬರಗಾಲಿ, ಪ್ರಭವ ಪಟ್ಟಣಕರ್, ರೇವಯ್ಯಾ ಸ್ವಾಮಿ, ಭಾಗ್ಯಶ್ರೀ ಮರಗೋಳ, ಕವಿತಾ ಕವಳೆ, ಧರ್ಮಣ್ಣ ಹೆಚ್ ಧನ್ನಿ, ಶಿವರಾಜ ಅಂಡಗಿ, ಶರಣರಾಜ ಚಪ್ಪರಬಂದಿ, ಕಲ್ಯಾಣಕುಮಾರ ಶೀಲವಂತ, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ಜಯಶ್ರೀ ಜಮಾದಾರ, ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಮಹಾನಂದಾ ಹುಲಿ, ಎಸ್ ಕೆ ಬಿರಾದಾರ, ನಾಗಪ್ಪ ಸಜ್ಜನ್, ಸಂತೋಷ ಕುಡಳ್ಳಿ, ಸುರೇಶ ದೇಶಪಾಂಡೆ, ಸುರೇಶ ಲೇಂಗಟಿ, ಶರಣಬಸಪ್ಪ ಕೋಬಾಳ, ವೀರಭದ್ರಪ್ಪ ಗುರುಮಿಠಕಲ್, ಎಂ ಎನ್ ಸುಗಂಧಿ, ಶಿವಾನಂದ ಸುರವಸೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗಮನ ಸೆಳೆದ ಸಾಹಿತ್ಯ ಸಿಂಚನ ಗೋಷ್ಠಿ:
ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಿಂಚನ ಗೋಷ್ಠಿಯಲ್ಲಿ ವಿಮರ್ಶಾ ನೋಟಗಳು-ಸಾಹಿತ್ಯದ ಮ್ವಲ್ಯಗಳು ಕುರಿತು ಡಾ. ಜಗನ್ನಾಥ ತರನಳ್ಳಿ, ಆಧುನಿಕ ಸಾಹಿತ್ಯಕ್ಕಿರುವ ಸವಾಲುಗಳು-ಪರಿಹಾರೋಪಾಯಗಳು ಕುರಿತು ಡಾ. ಅಪ್ಪಗೆರೆ ಸೋಮಶೇಕರ, ಸಮ್ಮೇಳನಾಧ್ಯಕ್ಷರ ಬದುಕು ಬರಹದ ಕುರಿತು ಡಾ. ಸಂತೋಷಕುಮಾರ ಕಂಬಾರ ಮಾತನಾಡಿದರು. ವಿಠಲ ಬೀಮನ್, ಲತಾ ದೇಶಪಾಂಡೆ,. ನರಸಿಂಗರಾವ ಹೇಮನೂರ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಸುನೀತ ಮಾಳಗಿ, ಶೇಖ್ ಸಮ್ರೀನ್, ಈರಣ್ಣಾ ಸೋನಾರ, ಕುಶಾಲ ಧರ್ಗಿ ಇತರರು ಉಪಸ್ಥಿತರಿದ್ದರು.
ಕಾವ್ಯ ಕಿರಣ ಎಂಬ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಲೇಖಕಿ ಡಾ. ಜಯದೇವಿ ಗಾಯಕವಾಡ, ಕಾವ್ಯ ಪರಂಪರೆಯನ್ನು ಅಧ್ಯಯನ ಮುಖ್ಯ. ಆಗ ಮಾತ್ರ ಕಾವ್ಯಕ್ಕೆ ಹೊಸ ಸ್ಪರ್ಶ ಕೊಡಲು ಸಾಧ್ಯ. ಅನುಭವದ ಕೊರತೆಯಿಂದ ಕಾವ್ಯ ಮಿಡಿಯುತ್ತಿಲ್ಲ. ಬದುಕು ಮತ್ತು ಬರಹ ಒಂದಾಗಬೇಕು. ಸಾಹಿತಿಗೆ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಬೇಕು ಹಾಗೂ ಸಾಮಾಜಿಕ ಜವಾಬ್ದಾರಿ ಇರಬೇಕಾಗಿದೆ ಎಂದರು. ಇಮದಿನ ವ್ಯವಸ್ಥೆ ಬಿರುದ್ಧ ಸಾಹಿತ್ಯ ರಚಿಸುವಂತೆ ಯುವ ಬರಹಗಾರರಿಗೆ ಸಲಹೆ ನೀಡಿದರು. ಬಸವರಾಜ ಬಳೂಂಡಗಿ, ಸೇವಂತಾ ಚವ್ಹಾಣ, ನಂದಿನಿ ಸನಬಾಳ, ಸ್ನೇಹಾ ಕಟ್ಟಿಮನಿ, ರೇವಣಸಿದ್ಧ ಗುಂಡಗುರ್ತಿ, ಲಲಿತಾ ಪಾಟೀಲ, ಜಯಶ್ರೀ ಕಾಳನುರಕರ್ ವೇದಿಕೆ ಮೇಲಿದ್ದರು.
ಪತ್ರಕರ್ತ-ಸಾಹಿತಿ ಡಾ. ಶಿವರಂಜನ್ ಸತ್ಯಂಪೇಟೆ ಸಮಾರೋಪ ನುಡಿಗಳನ್ನಾಡಿ, ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಸಾಹಿತ್ಯವನ್ನು ಓದಬೇಕು. ಇಂದಿನ ಯುವಕರಿಗೆ ಸಾಹಿತ್ಯದ ಸಂಗವಿಲ್ಲದಿರುವುದರಿoದ ಮನುಷ್ಯ ಸಂಬoಧಗಳು ಹಾಳಾಗುತ್ತಿವೆ. ಸಾಹಿತ್ಯವೆಂದರೆ ಬರೀ ಮಾತಲ್ಲ. ಅದು ನುಡಿದರೆ ಮುತ್ತಿನ ಹಾರ, ಮಾತೆಂಬುದು ಜ್ಯೋತಿರ್ಲಿಂಗ ಇದ್ದಂತೆ. ಒಂದು ನಾಡಿನ ಶ್ರೇಷ್ಠತೆ ಸಾಹಿತ್ಯದಲ್ಲಿಯೇ ಇದೆ. ಕನ್ನಡದ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾಂiÀið ಮಾಧ್ಯಮಗಳು ಸಹ ಮಾಡಬೇಕಿದೆ. ಕನ್ನಡ ಉಳಿಸಲು ಸಾಮಾನ್ಯರ ಜತೆಗೆ ರಾಜಕಾರಣಿಗಳ ಇಚ್ಛಾಶಕ್ತಿಯ ಅಗತ್ಯವಿದೆ. ಕನ್ನಡ ಕಣ್ಮರೆ ಆಗಬಾರದು. ಭಾಷೆ ಸತ್ತ ಮೇಲೆ ಜನ ಸಾಯುವುದು ಸುಲಭ. ಜನ ಬದುಕಬೇಕಾದರೆ ಭಾಷೆಯನ್ನು ತಾಯಿಯಂತೆ ಬದುಕಬೇಕು. ಬರಹಗಾರರು ವರ್ತಮಾನದ ತಲ್ಲಣಗಳಿಗೆ ದನಿಯಾಗಬೇಕು. ಕನ್ನಡ ಕಟ್ಟುವ ಕ್ರಿಯೆಯಲ್ಲಿ ಇಂದು ನಡೆದ ತಾಲೂಕು ಸಮ್ಮೇಳನ ಬಹಳ ಯಶಸ್ವಿಯಾಗಿದೆ ಎಂದರು.
ಬಸವರಾಜ ಕೋನೆಕ್, ವಿದ್ಯಾ ಕೊರಳ್ಳಿ, ಡಾ. ರೆಹಮಾನ್ ಪಟೇಲ್, ಶಿವಾನಂದ ನಾಲವಾರ, ಶಿವಕುಮಾರ ಸಿರಿ, ಪ್ರಭುಲಿಂಗ ಮೂಲಗೆ, ರವಿಕುಮಾರ ಶಹಾಪುರಕರ್, ಶರಣಪ್ಪ ಗಂಜಿ, ಸುಭಾಷ ಸುಬೇದಾರ, ಪ್ರಿಯಾಂಕಾ ಪಾಟೀಲ, ರಾಜೇಂದ್ರ ಮಾಡಬೂಳ ದಿನೇಶ ಮದಕರಿ ವೇದಿಕೆ ಮೇಲಿದ್ದರು.
ವಿವಿಧ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸತ್ಕರಿಸಲಾಯಿತು.
ಮಿನಿ ವಿಧಾನಸೌಧದಿಂದ ಆರಂಭಗೊoಡ ಸಮ್ಮೇಳನಾಧ್ಯಕ್ಷರ ಸಾಂಸ್ಕೃತಿಕ ಮೆರವಣಿಗೆಗೆ ಪಾಲಿಕೆ ಉಪ ಮಹಾಪೌರರಾದ ತೃಪ್ತಿ ಲಾಖೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ರಾಜುಗೌಡ ನಾಗನಹಳ್ಳಿ, ಭಾನುಕುಮಾರ ಗಿರೇಗೋಳ, ನರಸಿಂಹ ಮೆಂಡನ್, ವಿದ್ಯಾಸಾಗರ ದೇಶಮುಖ, ಶರಣು ಹೊನ್ನಗೆಜ್ಜೆ, ಮಲ್ಲಿನಾಥ ದೇಶಮುಖ, ಸಂದೀಪ ದೇಸಾಯಿ, ಡಿ.ಪಿ. ಸಜ್ಜನ್, ನವಾಬ ಖಾನ್, ಚನ್ನಬಸಪ್ಪ ಸಜ್ಜನ್ ಉಪಸ್ಥಿತರಿದ್ದರು. ಮಕ್ಕಳ ಕೋಲಾಟ, ಲೇಜಿಮು ಜನರ ವಿಶೇಷ ಗಮನ ಸೆಳೆಯಿತು. ಡೊಳ್ಳಿನ ನಾದಕ್ಕೆ ಸಮ್ಮೇಳನಾಧ್ಯಕ್ಷ ಡಾ. ಶ್ರೀಶೈಲ ನಾಗರಾಳ ಹಾಗೂ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಭರ್ಜರಿ ನೃತ್ಯ ಮಾಡಿದರು. ಮಕ್ಕಳು ಧರಿಸಿದ ಶರಣರ ವೇಶಧಾರಿಗಳು ಹನ್ನೇರಡನೆಯ ಶತಮಾನದ ಸನ್ನಿವೇಶ ಕಣ್ಮುಂದೆ ಬಂದ ಅನುಭವ ಆಯಿತು.


