ಕಲಬುರಗಿ| ಭಾರಿ ಮಳೆ; ರೈತರು ತೋಟಗಾರಿಕೆ ಬೆಳೆಗಳಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳು

Date:

Share post:

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಗಳಲ್ಲಿ ಕೆಳಗಿನಂತೆ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ಹೊಲದ ಸಿದ್ಧತೆ ಮತ್ತು ಬಸಿಕಾಲುವೆ ವ್ಯವಸ್ಥೆ (ಮಳೆ ಪ್ರಾರಂಭವಾಗುವ ಮೊದಲು/ಆರಂಭದಲ್ಲಿ): ನೀರು ನಿಲ್ಲುವುದನ್ನು ತಡೆಯಲು ತರಕಾರಿಗಳು ಮತ್ತು ಹೂವು ಬೆಳೆಗಳಿಗಾಗಿ ಎತ್ತರದ ಬೋದುಗಳನ್ನು ನಿರ್ಮಿಸಬೇಕು. ಬಸಿಕಾಲುವೆಗಳನ್ನು ಅಗೆಯಬೇಕು ಅಥವಾ ತ್ವರಿತ ಹರಿವನ್ನು ಅನುಮತಿಸಲು ಅಸ್ತಿತ್ವದಲ್ಲಿರುವ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಮರಗಳ ಸುತ್ತಲೂ ನೀರು ನಿಲ್ಲುವುದನ್ನು ತಪ್ಪಿಸಲು ತೋಟಗಳಲ್ಲಿ ಇಳಿಜಾರು ಆಧಾರಿತ ಕಾಲುವೆಗಳನ್ನು ನಿರ್ಮಿಸಬೇಕು. ಅತೀ ಹೆಚ್ಚು ನೀರು ನಿಲ್ಲುವ ತೋಟಗಳಲ್ಲಿ ಹೆಚ್ಚುವರಿ ಮಳೆನೀರನ್ನು ಬೇರೆಡೆಗೆ ತಿರುಗಿಸಲು ಮರಳು ಚೀಲಗಳನ್ನು ಅಥವಾ ತಾತ್ಕಾಲಿಕ ತಡೆಗೋಡೆಗಳನ್ನು ನಿರ್ಮಿಸಬೇಕು.

ತೋಟಗಳ ನಿರ್ವಹಣೆ: ಬಾಳೆ, ಪಪ್ಪಾಯಿ ಮತ್ತು ಟೊಮೆಟೊದಂತಹ ಗಿಡಗಳು ನೆಲಕ್ಕೆ ಬಿದ್ದು ಹಾಳಾಗದಂತೆ ತಡೆಯಲು ಗಿಡಗಳನ್ನು ಆಧಾರವಾಗಿ ನೆಡುಗೋಲುಗಳನ್ನು ಬಳಸಬೇಕು. ಬಳ್ಳಿಯಂತೆ ಹರಡುವ ಬೆಳೆಗಳಿಗೆ (ಸೋರೆಕಾಯಿ, ಹಾಗಲಕಾಯಿ, ಸೌತೆಕಾಯಿ), ಹಣ್ಣುಗಳು ಹಾಳಾಗದಂತೆ ಮಣ್ಣಿನಿಂದ ದೂರವಿಡಲು ಹಂದರ ಪದ್ಧತಿಯನ್ನು ಅಳವಡಿಸುವುದು. ಭಾರೀ ಮಳೆಯಾಗುವ ಸಂಭವದ ಮುನ್ಸೂಚನೆಯಿದ್ದಲ್ಲಿ ಅತಿಯಾದ ನೀರಾವರಿಯನ್ನು ತಪ್ಪಿಸಬೇಕು.

ರೋಗ ಮತ್ತು ಕೀಟ ನಿರ್ವಹಣೆ: ಭಾರಿ ಮಳೆಯು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಕಾಯಿಲೆಗಳಿಗೆ (ಬ್ಲೈಟ್, ವಿಲ್ಟ್, ಬೇರು ಕೊಳೆತ, ಆಂಥ್ರಾಕ್ನೋಸ್) ಅನುಕೂಲಕರವಾಗಿದೆ. ಮಳೆಗಾಲದ ಮೊದಲು ಅಥವಾ ನಂತರ ತಾಮ್ರ ಆಕ್ಸಿಕ್ಲೋರೈಡ್, ಮ್ಯಾಂಕೋಜೆಬ್ ಅಥವಾ ಕಾಬೆರ್ಂಡಜಿಮ್ನಂತಹ ಶಿಲೀಂಧ್ರನಾಶಕಗಳ ರೋಗನಿರೋಧಕ ಸಿಂಪಡಣೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಬೆಳೆಗಳ ರಕ್ಷಣೆಗಾಗಿ ಗಿಡಗಳ ಸುತ್ತಲೂ/ಸಾಲುಗಳಲ್ಲಿ ಜೈವಿಕ ಪೀಡೆನಾಶಕಗಳನ್ನು (ಟ್ರೈಕೊಡರ್ಮಾ, ಸ್ಯೂಡೋಮೊನಾಸ್ ಪ್ಲೋರೊಸೆನ್ಸ್) ಬಳಸಬೇಕು. ಆದ್ರ್ರ ಸ್ಥಿತಿಯಲ್ಲಿ ವೇಗವಾಗಿ ಹರಡುವ ಬಸವನ ಹುಳುಗಳು, ಗೊಂಡೆಹುಳುಗಳು, ಹಣ್ಣಿನ ನೊಣಗಳ ಕಡೆಗೆ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.

ಪೋಷಕಾಂಶ ನಿರ್ವಹಣೆ: ಭಾರಿ ಮಳೆಯಿಂದ ಸಾರಜನಕ ಮತ್ತು ಪೊಟ್ಯಾಸಿಯಮ್ ಸೋರಿಕೆಯಾಗುತ್ತದೆ. ಆದುದ್ದರಿಂದ ಮಳೆಯ ನಂತರ, ತ್ವರಿತ ಚೇತರಿಕೆಗಾಗಿ 1-2% ಯೂರಿಯಾ ಅಥವಾ 1% ಪೊಟ್ಯಾಸಿಯಮ್ ನೈಟ್ರೇಟ್ ಅನ್ನು ಸಿಂಪಡಿಸಬೇಕು. ಪೋಷಕಾಂಶ ಗಳ ಕೊರತೆಯ ಲಕ್ಷಣಗಳು ಕಂಡುಬಂದರೆ ಸೂಕ್ಷ್ಮ ಪೋಷಕಾಂಶಗಳನ್ನು (Zn, B, Fe, Mn) ಸಿಂಪಡಿಸಬೇಕು.

 

ಮಳೆಯ ನಂತರದ ಚೇತರಿಕೆ: ಹೊಲ ಮತ್ತು ತೋಟಗಳಿಂದ ನಿಂತ ನೀರನ್ನು ತಕ್ಷಣ ಹೊರಹಾಕಬೇಕು. ಬೆಳೆಗಳಲ್ಲಿ ಒತ್ತಡವನ್ನು ಕಡಿಮೆ ಮಾಡಲು ಬೆಳವಣಿಗೆಯ ಉತ್ತೇಜಕಗಳನ್ನು (ಕಡಲಕಳೆ ಸಾರ, ಹ್ಯೂಮಿಕ್ ಆಮ್ಲ, ಪಂಚಗವ್ಯ, ವರ್ಮಿವಾಶ್) ಸಿಂಪಡಿಸಿ, ರೋಗ ಮತ್ತು ಕೀಟಬಾಧೆ ಹರಡುವುದನ್ನು ನಿಯಂತ್ರಿಸಲು ರೋಗಪೀಡಿತ, ಕೊಳೆಯುತ್ತಿರುವ ಅಥವಾ ಮುರಿದ ಸಸ್ಯ ಭಾಗಗಳನ್ನು ತೆಗೆದುಹಾಕಬೇಕು.

 

ಹಣ್ಣಿನ ತೋಟಗಳಿಗೆ ವಿಶೇಷ ಕಾಳಜಿ: ಮರಗಳ ನೀರು ನಿಲ್ಲುವ ಪ್ರದೇಶಗಳ ಸುತ್ತಲೂ ಬಸಿಗಾಲುವೆ ಮತ್ತು ಕಂದಕಗಳನ್ನು ನಿರ್ಮಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲುವ ತೋಟಗಳಲ್ಲಿ ಬೇರುಗಳ ಉಸಿರುಗಟ್ಟುವಿಕೆಯನ್ನು ತಪ್ಪಿಸಲು ನಿಗದಿತ ಪ್ರಮಾಣದಲ್ಲಿ ಸುಣ್ಣ/ಜಿಪ್ಸಮ್ ಅನ್ನು ಬಳಸಬೇಕು. ಬಾಳೆ/ಪಪ್ಪಾಯ ಬೆಳೆಗಳಿಗೆ ಆಧಾರಗೋಲುಗಳನ್ನು ನೆಡುವುದು ಹಾಗೂ ಹೆಚ್ಚುವರಿ ಬಾಳೆ ಮರಿಗಳನ್ನು ಮತ್ತು ಹೆಚ್ಚುವರಿ ಎಲೆಗಳನ್ನು ತೆಗೆದುಹಾಕಬೇಕು.ದ್ರಾಕ್ಷಿ/ದಾಳಿಂಬೆ/ಮಾವು ಬೆಳೆಗಳಿಗೆ ಮಳೆಯ ನಂತರ ರೋಗ ಮತ್ತು ಕೀಟ ನಿಯಂತ್ರಕ ಪೀಡೆನಾಶಕಗಳನ್ನು ಸಿಂಪಡಿಸಬೇಕೆಂದು ಅವರು ತಿಳಿಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ನುಡಿದಂತೆ ನಡೆಯುವ ಸರ್ಕಾರ‌ ನಮ್ಮದು, ಇದೂವರೆಗೆ 243 ಭರವಸೆ ಈಡೇರಿಸಿದ್ದೇವೆ: ಸಿದ್ದರಾಮಯ್ಯ

ಕಲಬುರಗಿ: ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ...

ಕಲಬುರಗಿ| ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್

ಕಲಬುರಗಿ: "ನಮ್ಮ ಪಕ್ಷ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನ...

ಕಲಬುರಗಿ| ಸುಗಮ ಆಡಳಿತಕ್ಕಾಗಿ ಪ್ರಜಾಸೌಧಗಳ ನಿರ್ಮಾಣ: ಡಾ.ಅಜಯ್ ಧರ್ಮಸಿಂಗ್

ಕಲಬುರಗಿ: ಸುಗಮ ಆಡಳಿತಕ್ಕಾಗಿ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿದೆ. ಈ ಭಾಗದ...

ಕಲಬುರಗಿ| ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಮಾಡಿ: ಮಲ್ಲಿಕಾರ್ಜುನ ಖರ್ಗೆ  

ಕಲಬುರಗಿ: ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿಯಲು ಮುಖ್ಯ ಕಾರಣ ಈ ಭಾಗದಲ್ಲಿ...