ಕಲಬುರಗಿ| ‘ಮನ್ ಕಿ ಬಾತ್’ ನಲ್ಲಿ ಬಹಮನಿ ಕೋಟೆ ಉಲ್ಲೇಖ; ನೆಲಮಟ್ಟದಲ್ಲಿ ನಿರ್ಲಕ್ಷ್ಯ: ಸಂಶೋಧಕರ ಆರೋಪ

Date:

Share post:

ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಕಲಬುರಗಿಯ ಬಹಮನಿ ಕೋಟೆಯನ್ನು ಉಲ್ಲೇಖಿಸಿರುವುದು ಸ್ವಾಗತಾರ್ಹವಾಗಿದೆ. ಪುರಾತತ್ವ ಇಲಾಖೆಯ ವಶದಲ್ಲಿರುವ ಈ ಸ್ಮಾರಕವನ್ನು ಇಲಾಖೆಯೇ ಪ್ರಧಾನಮಂತ್ರಿಗಳಿಗೆ ಪರಿಚಯಿಸಿರಬಹುದು ಎಂಬ ಅಭಿಪ್ರಾಯವಿದೆ. ಆದರೆ, ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆ ಸಲ್ಲಿಸುವುದಷ್ಟೇ ಸಾಕಾಗುವುದಿಲ್ಲ – ನೆಲಮಟ್ಟದ ವಾಸ್ತವಿಕತೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಸಂಶೋಧಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಇಲ್ಲಿನ ಸಂಶೋಧಕರಾದ ಮೊಹಮ್ಮದ್ ಆಯಾಜುದ್ದೀನ್ ಪಟೇಲ್, ರೆಹಮಾನ್ ಪಟೇಲ್ ಹಾಗೂ ಮೊಹಮ್ಮದ್ ಇಸ್ಮಾಯಿಲ್ ಅವರು, ಈ ಕಲಬುರಗಿ ಕೋಟೆಯೊಳಗೆ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಮಸೀದಿ ಇದೆ. ತನ್ನ ವೈಶಿಷ್ಟ್ಯಮಯ ವಾಸ್ತುಶೈಲಿಯಿಂದ ಖ್ಯಾತವಾಗಿರುವ ಈ ಮಸೀದಿಯ ಜೊತೆಗೆ, ವಿಶ್ವದ ಅತ್ಯಂತ ಉದ್ದದ ತೋಪುಗಳಲ್ಲಿ ಒಂದೂ ಇಲ್ಲಿಯ ಕೋಟೆಯ ಸಂಕೀರ್ಣದಲ್ಲಿದೆ. ಇಂತಹ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿದ ಈ ಸ್ಮಾರಕಗಳು ಇನ್ನೂ ನಿರ್ಲಕ್ಷ್ಯಕ್ಕೊಳಗಾಗಿವೆ ಎಂದಿದ್ದಾರೆ.

ಶೋಧಕರಾದ ಮೊಹಮ್ಮದ್ ಆಯಾಜುದ್ದೀನ್ ಪಟೇಲ್, ರೆಹಮಾನ್ ಪಟೇಲ್ ಹಾಗೂ ಮೊಹಮ್ಮದ್ ಇಸ್ಮಾಯಿಲ್ ಅವರ ಪ್ರಕಾರ, ಕಳೆದ ಐದು ವರ್ಷಗಳಿಂದ ಜಾಮಾ ಮಸೀದಿಯನ್ನು ಇಲಾಖೆ ನಿರ್ಲಕ್ಷ್ಯ ಮಾಡುತ್ತಿದೆ. ಮಳೆಗಾಲದಲ್ಲಿ ಮೇಲ್ಚಾವಣಿ ಜಿಗುಟಾಗಿ ನೀರು ಸೋರಿಕೆಯಾಗುತ್ತಿರುವುದು ಗಂಭೀರ ಚಿಂತನೆಗೆ ಉಂಟುಮಾಡಿದೆ. ತಕ್ಷಣದ ದುರಸ್ತಿ ಕೈಗೊಳ್ಳದಿದ್ದರೆ, ಈ ವಾಸ್ತುಶಿಲ್ಪದ ಅದ್ಭುತವು ಹಾನಿಗೊಳಗಾಗಿ ಯಾವಾಗಲಾದರೂ ಕುಸಿಯುವ ಅಪಾಯವಿದೆ.

ಅದೇ ರೀತಿ, 2016ರಲ್ಲಿ “ವಿಶ್ವದ ಅತ್ಯಂತ ಉದ್ದದ ತೋಪು” ಎಂದು ಗುರುತಿಸಲ್ಪಟ್ಟಿರುವ ಈ ತೋಪು ಇನ್ನೂ ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆಯಬೇಕಿದೆ. ಇಲಾಖೆಯ ನಿರ್ಲಕ್ಷ್ಯದಿಂದಾಗಿ ಶತಮಾನದಷ್ಟು ಕಾಲ ಬಹಮನಿ ಸಾಮ್ರಾಜ್ಯದ ರಾಜಧಾನಿಯಾಗಿ ಸೇವೆ ಸಲ್ಲಿಸಿದ ಈ 14ನೇ ಶತಮಾನದ ಸ್ಮಾರಕಗಳು ಜಾಗತಿಕ ಪ್ರವಾಸೋದ್ಯಮದಲ್ಲಿ ಅಗತ್ಯವಾದ ಸ್ಥಾನ ಪಡೆಯದೆ ಉಳಿದಿವೆ.

ಸ್ಮಾರಕಗಳನ್ನು ಕೇವಲ ಪ್ರಶಂಸಿಸುವುದಕ್ಕಿoತ ಅವುಗಳನ್ನು ಸಂರಕ್ಷಿಸಿ ಪುನಃಸ್ಥಾಪನೆ ಮಾಡುವ ನಿಜವಾದ ಕ್ರಮಗಳನ್ನು ಕೈಗೊಂಡಾಗ ಮಾತ್ರ ಪ್ರಧಾನಮಂತ್ರಿಯವರ ಮಾತಿನ ಅರ್ಥ ಸಾರ್ಥಕವಾಗುತ್ತದೆ ಮತ್ತು ಈ ಐತಿಹಾಸಿಕ ಸ್ಮಾರಕಗಳನ್ನು ಜಗತ್ತಿಗೆ ಪರಿಚಯಿಸುವ ಅವಕಾಶ ಒದಗುತ್ತದೆ ಎಂದು ಅವರು ಹೇಳಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ: ಡಾ.ಮಹೇಶ ಗಂವ್ಹಾರ

ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ...

ಕಲಬುರಗಿ| ಸರಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಕಲಬುರಗಿ: ನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಫೌಜಿಯಾ...

ಕಲಬುರಗಿ| ಜಿಲ್ಲಾಧಿಕಾರಿಗಳಿಂದ ಸಿಟಿ ರೌಂಡ್: ರಸ್ತೆ ದುರಸ್ತಿ,‌ ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ...

ಕಲಬುರಗಿ| ಬಾಲ್ಯ ವಿವಾಹ, ಫೋಕ್ಸೋ ಪ್ರಕರಣಗಳ ಬಗ್ಗೆ ನಿಗಾವಹಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ಸೂಚನೆ

ಕಲಬುರಗಿ: ಬಾಲ್ಯವಿವಾಹ ಮತ್ತು ಫೋಕ್ಸೋ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು...