ಕಲಬುರಗಿ: ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಮುಂದುವರೆದಿದ್ದು, ಹಲವೆಡೆ ಜನರ ಜೀವನ ಅಸ್ತವ್ಯಸ್ತವಾಗಿದೆ.
ನಿರಂತರ ಮಳೆಗೆ ಜಿಲ್ಲಾದ್ಯಂತ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಇದರ ನಡುವೆ ಜಮೀನಿಗೆ ತೇರಳುವಾಗ ಜಾನುವಾರುಗಳು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಕಮಲಾಪೂರ್ ತಾಲೂಕಿನ ಕುದಮೂಡ್ ಗ್ರಾಮದಲ್ಲಿ ನಡೆದಿದೆ.
ಕುದಮೂಡ ಗ್ರಾಮದ ಸೇತುವೆಯ ಮೇಲಿಂದ ರೈತರು ಜಾನುವಾರುಗಳನ್ನು ಹೊಲಕ್ಕೆ ತೇರಳುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ಹಲವು ಕಡೆಗಳಲ್ಲಿ ಮನೆ ಗೋಡೆ, ಮೇಲ್ಛಾವಣಿಗಳು ಕುಸಿದುಬಿಡ್ಡಿರುವ ಘಟನೆಗಳು ವಿವಿಧ ತಾಲೂಕಿನಲ್ಲಿ ನಡೆದಿವೆ.


