ಕಲಬುರಗಿ: ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಆರೋಪದ ಮೇರೆಗೆ ಪತಿಯೊಬ್ಬ ತನ್ನ ಆಪ್ತ ಸ್ನೇಹಿತನನ್ನೇ ವೈಯರ್ ನಿಂದ ಬಿಗಿದು ಕೊಲೆ ಮಾಡಿರುವ ಘಟನೆ ಕಮಲಾಪುರ ತಾಲ್ಲೂಕಿನ ಮುರಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಅಫಜಲಪುರ ಮೂಲದ ಅಂಬರೀಶ್ (28) ಸ್ನೇಹಿತನಿಂದಲೆ ಕೊಲೆಯಾದ ಯುವಕ ಎಂದು ತಿಳಿದುಬಂದಿದೆ.
ಕೊಲೆಯಾದ ಅಂಬರೀಶ್, ತನ್ನ ಸ್ನೇಹಿತ ಅಜಯ್ ಪತ್ನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧ ಕುರಿತಾಗಿ ಗೊತ್ತಾದ ಬಳಿಕ ಅಜಯ್ ತನ್ನ ಸ್ನೇಹಿತ ಅಂಬರೀಶ್ ನನ್ನು ಬೆಂಗಳೂರಿನಿಂದ ಗ್ರಾಮಕ್ಕೆ ಕರೆಯಿಸಿಕೊಂಡಿದ್ದ, ಬಳಿಕ ಸ್ಕೆಚ್ ಹಾಕಿ ಅಜಯ್ ಮತ್ತು ಆತನ ಸಂಗಡಿಗರು ಕೂಡಿಕೊಂಡು ಅಂಬರೀಶ್ ನನ್ನು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


