ಕಲಬುರಗಿ| ಕಿಣ್ಣಿಸುಲ್ತಾನ ಗ್ರಾಪಂ ಉಪಾಧ್ಯಕ್ಷರಾಗಿ ಮಥುರಾಬಾಯಿ ಅವಿರೋಧ ಆಯ್ಕೆ

Date:

Share post:

ಕಲಬುರಗಿ: ಆಳಂದ ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಸ್ಸಿ ಮೀಸಲು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಿಣ್ಣಿಸುಲ್ತಾನ ತಾಂಡಾದ ಬಿಜೆಪಿ ಬೆಂಬಲಿತ ಸದಸ್ಯೆ ಮಥುರಾಬಾಯಿ ಸುಭಾಷ ಚವ್ಹಾಣ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯೆ ಮಥುರಾಬಾಯಿ ಚವ್ಹಾಣ ಅವರ ಹೊರತುಪಡಿಸಿ ಯಾರೊಬ್ಬರ ನಾಮಪತ್ರ ಸಲ್ಲಿಕೆ ಮಾಡಿರುವುದರಿಂದ ಮಥುರಾಬಾಯಿ ಅವರನ್ನು ಅವಿರೋಧವನ್ನಾಗಿ ಚುನಾವಣಾಧಿಕಾರಿಗಳು ಘೋಷಿಸಿದರು. ಪಿಡಿಒ ರಮೇಶ ಪ್ಯಾಟಿ, ಗ್ರಾಮ ಆಡಳಿತಾಧಿಕಾರಿ ದತ್ತಾ ರಾಠೋಡ, ಕಂದಾಯ ನಿರೀಕ್ಷಿಕ ಅಲ್ಲಾವೋದ್ದೀನ ಶೇಖ ಚುನಾವಣೆ ಪ್ರಕ್ರಿಯೆಗೆ ಸಹಕರಿಸಿದರು.

ಬಳಿಕ ನೂತನ ಉಪಾಧ್ಯಕ್ಷರಿಗೆ ಗ್ರಾಪಂ ಅಧ್ಯಕ್ಷ ಮಹಿಬೂಬ ಭಾಷಾ ಶೇಖ ಅವರು ಸನ್ಮಾನಿಸಿ ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯವಾಗಿದೆ. ಎಲ್ಲರೂ ಕೂಡಿ ಉಳಿದಷ್ಟು ಅವಧಿಯಲ್ಲಿ ಕಾಮಗಾರಿ ಕೈಗೊಂಡು ಜನರಿಗೆ ಅನುಕೂಲ ಮಾಡಿಕೊಡೋಣಾ ಎಂದು ಹೇಳಿದರು.

ಈ ಸಂದರ್ಭಧಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ನಾಗಮ್ಮ ಮೂಲಗೆ, ಸದಸ್ಯ ಕೃಷ್ಣಾ ಕಾಂಬಳೆ, ಸುರೇಶ ಕದರಗೆ, ಕುಪ್ಪಣ್ಣಾ ವಡಗಾಂವ, ಶಾಂತು ಶಹಾಪೂರೆ, ಶಿವರಾಯ ಪೂಜಾರಿ, ಲಲಿತಾ ಮೋದೆ, ಆಶಾ ಧೂಳೆ, ಶಿವುಪುತ್ರ ಪೂಜಾರಿ, ಶರಣು ಕುಂಬಾರ ಸೇರಿದಂತೆ ಗ್ರಾಮದ ಮುಖಂಡ ಪಂಡಿತರಾವ್ ಪಾಟೀಲ, ರಾಜು ಪಾಟೀಲ, ಬಸವರಾಜ ಕೇರೂರ, ನಾಗೇಂದ್ರ ಚನ್ನಶಟ್ಟಿ, ಕಲ್ಯಾಣಿ ಶೃಂಗೇರಿ, ನಿತೀನ ಚವ್ಹಾಣ, ಗುತ್ತಿಗೆದಾರ ಮಹಾದೇವ ಲಕುಕಳ್ಳೆ ಅನೇಕರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಸರ್ಕಾರಿ ಅಭಿಯೋಜಕರಿಗೆ ₹5 ಸಾವಿರ ಲಂಚ ನೀಡಲು ಯತ್ನಿಸಿದ ತಂದೆ-ಮಗ ಲೋಕಾ ವಶಕ್ಕೆ

ಕಲಬುರಗಿ: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ/ಎಸ್‌ಟಿ ಪ್ರಕರಣದಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ಸಹಕರಿಸುವ ಉದ್ದೇಶದಿಂದ...

ಕಲಬುರಗಿ| ಆಸ್ತಿಗಾಗಿ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಕಲಬುರಗಿ: ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ...

ಕಲಬುರಗಿ| ಬ್ರೇನ್ ಟಿಬಿಯಿಂದ ಬಳಲುತ್ತಿದ್ದ ತಾಯಿಗೆ ಯಶಸ್ವಿ ಚಿಕಿತ್ಸೆ ನೀಡಿದ ಜೀವ ಕಾಪಾಡಿದ ಬಸವೇಶ್ವರ ಆಸ್ಪತ್ರೆ ವೈದ್ಯರು

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ...

ಕಲಬುರಗಿ| ಕಾಳ‌ ಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಡಿಸ್ಟ್ರಿಬೂಟರ್ ಮೇಲೆ ಕ್ರಮ: ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್

ಕಲಬುರಗಿ: ಮದ್ಯ ಪ್ರಾಚ್ಯ ದೇಶದಲ್ಲಿನ‌ ಬಿಕ್ಕಟ್ಟಿನ ನಡುವೆ ಜಿಲ್ಲೆಯಲ್ಲಿ ಎಲ್ಲಿಯೆ ಕಾಳ...