ಕಲಬುರಗಿ| ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನ

Date:

Share post:

ಕಲಬುರಗಿ: ‘ಛಾಯಾಚಿತ್ರ ಕಲೆ ಯಂತ್ರ ಮುಖೇನ ಸೃಷ್ಟಿಯಾಗುತ್ತದೆ, ನಿಜ ಆದರೆ ಅದರ ಹಿಂದೆ ಸೃಜನಶೀಲ ಕಲಾವಿದನ ಮನಸ್ಸು ಇದ್ದರೆ ಅದು ಒಂದು ಸುಂದರ ಕಲಾಕೃತಿಯಾಗುತ್ತದೆ’ ಎಂದು ಜಿಲ್ಲಾ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ತೋಟದ ಹೇಳಿದರು.

ನಗರದ ಮಾನಕರ ಲೇಔಟ್ ನಲ್ಲಿರುವ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾದ ಹವ್ಯಾಸಿ ಛಾಯಾಗ್ರಾಹಕ ಉದಯಕುಮಾರ ಬಗಲಿ ಅವರ

ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿ ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ವೆಂಕಣ್ಣ ದೊಣ್ಣೆಗೌಡ ಅವರು, ‘ಛಾಯಾಚಿತ್ರಗಳು ಕಾಲದ ದಾಖಲೆಗಳಾಗಿ ಮಹತ್ವದ ಪಾತ್ರ ವಹಿಸುತ್ತವೆ, ನಿಸರ್ಗದಲ್ಲಿ ಎಲ್ಲವೂ ನಿರಂತರ ಬದಲಾವಣೆಯ ಪ್ರಕ್ರಿಯೆಗೆ ಒಳಗತ್ತಲೇ ಇರುತ್ತದೆ, ಆದರೆ ತಲೆಮಾರುಗಳು ಉರುಳಿದರೂ, ಕಾಲದ ಅಂತರದಲ್ಲಿ, ಸನ್ನಿವೇಶ ಸಂದರ್ಭಗಳಲ್ಲಿ ಬದಲಾದ ಸ್ಥಿತಿಗಳನ್ನು ಛಾಯಾಚಿತ್ರಗಳು ತೋರಿಸುತ್ತವೆ’ ಎಂದರು.

ಮುಂದುವರಿದು ‘ಸಾವಿರಾರು ಶಬ್ದಗಳಲ್ಲಿ ವರ್ಣಿಸಬಹುದಾದುದನ್ನು ಒಂದು ಛಾಯಾಚಿತ್ರ ನೋಟ ಒಂದರಲ್ಲೇ ಎಲ್ಲವನ್ನೂ ಅರಿವಿಗೆ ತಂದುಕೊಡುತ್ತದೆ’ ಎಂದರು.

‘ಛಾಯಾಚಿತ್ರಕಲೆಯಲ್ಲಿ ಸನ್ನಿವೇಶದ ಆಯ್ಕೆ, ನೆರಳು ಬೆಳಕಿನ ಹೊಯ್ ದಾಟ ಬಹಳ ಮುಖ್ಯವಾಗಿರುತ್ತದೆ’ ಎಂದು ಇನ್ನೋರ್ವ ಅತಿಥಿಯಾಗಿದ್ದ ಕಲಾವಿದ ಗುರುಲಿಂಗ ಅರಳಿ ಅಭಿಮತಪಟ್ಟರು.

 

ಬಿಸಿಲು ಆರ್ಟ್ ಗ್ಯಾಲರಿಯ ಕ್ಯೂರೇಟರ್ ಮತ್ತು ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ವಿ.ಬಿ ಬಿರಾದಾರ ಮಾತನಾಡಿದರು.

ಕಲಾವಿದ ಮಲ್ಲಿಕಾರ್ಜುನ ಕೊರಳ್ಳಿಯವರು ಕಾರ್ಯಕ್ರಮವನ್ನು ನಿರೂಪಿಸಿದರು, ಕಲಾವಿದ ರಾಜು ಕಾಳೆ ವಂದಿಸಿದರು.

ಕಲಾವಿದರಾದ ಸೂರ್ಯಕಾಂತ ನಂದೂರ, ದೌಲತರಾಯ ದೇಸಾಯಿ, ಜಿತೇಂದ್ರ ಕೊಥಲೀಕರ, ನಾರಾಯಣ ಜೋಶಿ, ಮೌನೇಶ್ ಬಡಿಗೇರ, ಗಿರೀಶ ಕುಲಕರ್ಣಿ, ಡಾ ಶಿವಾನಂದ ಬಂಟನೂರ, ಜಗದೀಶ್ ಕಾಂಬಳೆ, ವಿಜಯಕುಮಾರ, ಕುಪೇಂದ್ರ ಮೊದಲಾದ ಕಲಾವಿದರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಕೃಷಿಯೇತರ ಭೂಮಿ ಪರಿವರ್ತನೆಗೆ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಸೋಮವಾರ ಕೃಷಿಯೇತರ ಭೂಮಿ ಪರಿವರ್ತನೆಗೆ...

ಕಲಬುರಗಿ| ಸಂಶೋಧನೆಗೆ ವಿಧಾನಶಾಸ್ತ್ರದ ಜ್ಞಾನ ಅತ್ಯಗತ್ಯ: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

ಕಲಬುರಗಿ: ಪರಿಣಾಮಕಾರಿ ಸಂಶೋಧನೆ ನಡೆಸಲು ಸಂಶೋಧನಾ ವಿಧಾನಶಾಸ್ತ್ರದ ಸಮಗ್ರ ಜ್ಞಾನ ಅತ್ಯಗತ್ಯವಾಗಿದೆ...

ಕಲಬುರಗಿ| ಮುಟ್ಟಿನ ರಜೆ ದುಡಿಯುವ ಮಹಿಳೆಯ ಹಕ್ಕಿನ ಭಾಗ: ಕೆ.ನೀಲಾ

ಕಲಬುರಗಿ: ದುಡಿಯುವ ಮಹಿಳೆಯರಿಗೆ ಮುಟ್ಟಿನ ರಜೆ ನೀಡಬೇಕು ಎಂದು ಸಲ್ಲಿಸಲಾದ ಅರ್ಜಿಯನ್ನು...

ಕಲಬುರಗಿ| ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಜೀಪ್ ಸಫಾರಿ ಮತ್ತು ಬೋಟಿಂಗ್ ಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

ಕಲಬುರಗಿ: ಚಂದ್ರಂಪಳ್ಳಿ ಜಲಾಶಯ, ಗೊಟ್ಟಂಗೊಟ್ಟ, ಎತ್ತಿಪೊತ್ತ ಜಲಪಾತ‌ ಸೇರಿದಂತೆ ದಟ್ಟ ಅರಣ್ಯದೊಂದಿಗೆ...