ಕಲಬುರಗಿ: ಕೌಶಲ್ಯಾಭಿವೃದ್ಧಿ ಅಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಕಲಬುರಗಿ (ಜಿಟಿಟಿಸಿ) ಕೇಂದ್ರದಲ್ಲಿ 5ನೇ ಸೇಮಸ್ಟರ್ನಲ್ಲಿ ತರಬೇತಿ ಪಡೆಯುತ್ತಿರುವ ಅಂಕಿತಾ ಆಳಂದ ಅವರು ವಿಶ್ವಕೌಶಲ್ಯ (ಮ್ಯಕಾನಿಕಲ್ ಕ್ಯಾಡ್) ರಾಜ್ಯಮಟ್ಟ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಅಂಕಿತಾ ಆಳಂದ ಇವರ ರಾಜ್ಯ ಮಟ್ಟದ ಸಾಧನೆಗಾಗಿ ಕಲಬುರಗಿ ಜಿಟಿಟಿಸಿ ಕಾಲೇಜಿನ ಪ್ರಾಂಶುಪಾಲರಾದ ಕು ಸುಧಾರಾಣಿ ಎಸ್ ಅಟ್ಟೂರ್, ಅಫಜಲಪುರ್ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಡಾ. ಪ್ರಭುದೇವ ಎಮ್.ಎಸ್, ತರಬೇತಿದಾರರಾದ ಅರುಣ ಸೂರ್ಯವಂಶಿ, ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿನಿಯ ಹರ್ಷವ್ಯಕ್ತಪಡಿಸಿ ಶೋಭ ಕೋರಿದ್ದಾರೆ ಎಂದು ಕಲಬುರಗಿ ಜಿಟಿಟಿಸಿ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


