ಕಲಬುರಗಿ: ಇಲ್ಲಿನ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ರಾಷ್ಟ್ರೀಯ ಸೇವಾ ಯೋಜನೆಯ “ಸಂಸ್ಥಾಪನಾ ದಿನಾಚರಣೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಗುಲ್ಬರ್ಗಾ ವಿಶ್ವ ವಿಧ್ಯಾಲಯದ ಕುಲಸಚಿವರಾದ ಡಾ.ರಮೇಶ ಲಂಡನ್ಕರ್ ಅವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ಕೊಟ್ಟರು.
ಬಳಿಕ ಮಾತನಾಡಿದ ಅವರು, ಎನ್ ಎಸ್ ಎಸ್ ಶಿಬಿರಾರ್ಥಿಗಳು ದೇಶದ ಆಸ್ತಿ ಮತ್ತು ನವ ಭಾರತ ನಿರ್ಮಾಣ ಮಾಡುವ ಶಕ್ತಿ ಇವರಲ್ಲಿ ಇದೆ ಎಂದು ಹೇಳಿದರು.
ಅದೇ ರೀತಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ ಆರ್.ಬಿ ಕೊಂಡ ಮಾತನಾಡಿ, ಎನ್ ಎಸ್ ಎಸ್ ನಿಂದ ವಿದ್ಯಾರ್ಥಿ ದೆಸೆಯಿಂದಲ್ಲೇ ಶಿಸ್ತು, ಮತ್ತು ರಾಷ್ಟ್ರೀಯ ಅಭಿಮಾನ, ಗೌರವ ಮಕ್ಕಳಲ್ಲಿ ಬೆಳೆಸುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮ ಕ್ಕೆ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ವೀಣಾ ಎಚ್. ಅವರು ವೇದಿಕೆ ಹಂಚಿಕೊಂಡರು.
ಎನ್ ಎಸ್ ಎಸ್ “B” ಘಟಕದ ಅಧಿಕಾರಿಗಳಾದ ಡಾ.ಸುಭಾಶ್ಚಂದ್ರ ದೊಡ್ಡಮನಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಭಾಷಣ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿಯಿತು.
ಡಾ.ಶ್ರೀದೇವಿ ಸಿದ್ದಣ್ಣ, ಎನ್ ಎಸ್ ಎಸ್ ಸ್ವಯಂ ನಿಧಿ ಘಟಕದ ಅಧಿಕಾರಿಗಳಾದ ಮಂಗಲ ಬಿರಾದಾರ, ಡಾ. ವಿಶ್ವನಾಥ ದೇವರಮನಿ, ಡಾ. ಜ್ಯೋತಿ ಪ್ರಕಾಶ್, ಡಾ. ರಾಜೇಶ, ಶರಣಪ್ಪ. ಮುಸ್ತಳ್ಳಿ, ಸುಷ್ಮಾ ಕುಲಕರ್ಣಿ ಮತ್ತು ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ವಿಧ್ಯಾರ್ಥಿನಿಯರು ಭಾಗವಹಿಸಿದರು.


