ಕಲಬುರಗಿ| ಪಾಕಿಸ್ತಾನ ವಿರುದ್ಧದ ಪಂದ್ಯ ಬಹಿಷ್ಕರಿಸಿ; ಅಮಿತ್ ಶಾ ಪುತ್ರನ ವಿರುದ್ಧ ಮಾತಾಡಿದ್ರೆ ತಪ್ಪಾ?: ಡಾ. ಅಜಯ್ ಸಿಂಗ್ 

Date:

Share post:

ಕಲಬುರಗಿ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಪಾಕಿಸ್ತಾನದ ಪಂದ್ಯ ಯಾರ ಪ್ರಯೋಜನಕ್ಕಾಗಿ ಆಡಿಸಲಾಗುತ್ತಿದೆ?; ಭಾರತೀಯರೆಲ್ಲರೂ ಈ ಪಂದ್ಯವನ್ನು ಬಹಿಷ್ಕಾರ ಹಾಕಬೇಕಾಗಿದೆ ಎಂದು ಕೆಕೆಆರ್ ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯ್ ಸಿಂಗ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ ಮಾಡಿ 6 ತಿಂಗಳಾಗಿಲ್ಲ, ಈಗ ಭಾರತ ಮತ್ತು ಪಾಕಿಸ್ತಾನ ಮಾಡುತ್ತಿದ್ದಾರೆ. ಯಾರ ಪ್ರಯೋಜನಕ್ಕಾಗಿ ಇವರು ಇದೆಲ್ಲ ಮಾಡ್ತಿದ್ದಾರೆ?. ಇದನ್ನ ಮಾಡಿದರೆ ಬಿಸಿಸಿಐಗೆ 2 ಸಾವಿರ ಅಥವಾ 3 ಸಾವಿರ ಕೋಟಿ ಆದಾಯ ಬರಬಹುದು. ಕೇಂದ್ರ ಸಚಿವ ಅಮಿತ್ ಶಾ ಮಗ ಜಯ್ ಶಾ ವಿರುದ್ಧ ಮಾತಾಡಿದರೆ ಕೆಟ್ಟದ್ದಾ? ಇಂದು ಪ್ರಶ್ನಿಸಿದರು.

ಈಗಾಲೇ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಮೃತ ಯೋಧ ಶುಭಂ ದ್ವಿವೇದಿ ಅವರ ಪತ್ನಿ ಕೂಡ ವಿರೋಧಿಸಿದ್ದಾರೆ. ಘಟನೆಯಾಗಿ ಒಂದು ವರ್ಷವೇ ಆಗಿಲ್ಲ. ಎಷ್ಟೋ ಜನರು ಪ್ರಾಣ ಕೊಟ್ಟಿದ್ದಾರೆ, ಅವರ ಪ್ರಾಣಕ್ಕೆ ಬೆಲೆನೇ ಇಲ್ವಾ? ಪಹಲ್ಗಾಮ್ ಘಟನೆ ದೇಶದಲ್ಲಿ ಇನ್ನೂ ಜೀವಂತವಾಗಿದೆ. ಭಾರತೀಯರೆಲ್ಲರೂ ಬಹಿಷ್ಕಾರ ಹಾಕಬೇಕು ಎಂದರು.

ಪ್ರಧಾನಿ ಮೋದಿ ಅವರು, ಒಂದೇ ಕಡೆ ನೀರು ಮತ್ತು ರಕ್ತ ಹರಿವುದಿಲ್ಲ ಎನ್ನುತ್ತಾರೆ, ಈಗ ಅದೇ ಪಾಕ್ ವಿರುದ್ಧ ಪಂದ್ಯವಾಡಿ ಯಾರಿಗೆ ಆದಾಯ ಕೊಡುತ್ತಿದ್ದಾರೆ. ಪಂದ್ಯ ನಡೆದರೆ ಅವರು ಮತ್ತಷ್ಟು ಭಯೋತ್ಪಾದನ ಪ್ರಚೋದನೆ ನೀಡುತ್ತಾರೆ, ಮತ್ತೆ ದಾಳಿ ನಡೆಸುತ್ತಾರೆ, ಒಂದು ವೇಳೆ ನಾವು ಬಹಿಷ್ಕಾರ ಹಾಕಿದರೆ ಪಾಕಿಸ್ತಾನಕ್ಕೆ ಸರಿಯಾಗಿ ತಿರುಗೇಟು ಕೊಟ್ಟಂತಾಗುತ್ತದೆ. ಎಲ್ಲ ರೀತಿಯಲ್ಲೂ ಪಾಕಿಸ್ತಾನಕ್ಕೆ ಬಹಿಷ್ಕಾರ ಹಾಕಿದಾಗ ಮಾತ್ರ ಅದಕ್ಕೆ ಬುದ್ಧಿ ಬರುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಜಯ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ: 625ಕ್ಕೆ 623 ಅಂಕ ಪಡೆದು ಜಿಲ್ಲೆಗೆ ಗಣೇಶ್ ಬೋಸ್ಲೆ ಫಸ್ಟ್ ರ್ಯಾಂಕ್

ಕಲಬುರಗಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಕಲಬುರಗಿ ತಾಲೂಕಿನ...

ಕಲಬುರಗಿ: ಗುಂಡಿನ ದಾಳಿ; ವ್ಯಕ್ತಿಯ ಭೀಕರ ಕೊಲೆ

ಕಲಬುರಗಿ: ಬಲರಾಮ ಚೌಕ್ ನಿಂದ ವಾಡಿ ಪಟ್ಟಣಕ್ಕೆ ಸ್ಕೂಟಿ ಮೇಲೆ ಹೋಗುತ್ತಿದ್ದ...

ಕಲಬುರಗಿ| ಏ.15 ರಿಂದ 17ರ ವರೆಗೆ ಹೀಟ್ ವೇವ್ ಆರೆಂಜ್ ಅಲರ್ಟ್: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ 

ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ಇದೇ ಏಪ್ರೀಲ್ 15 ರಿಂದ 17ರ ವರೆಗೆ...

ಕಲಬುರಗಿ| ಅಂಬೇಡ್ಕರ್ ಜಯಂತಿ: ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ: ಡಿಸಿ ಆದೇಶ

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಯಾವುದೇ ಅಹಿತಕರ...