ಕಲಬುರಗಿ : ಸಾಲದ ಬಾಧೆ ತಾಳಲಾರದೇ ನದಿಗೆ ಹಾರಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಚೆನ್ನೂರು ಗ್ರಾಮದ ಚೆನ್ನೂರು ನದಿಯಲ್ಲಿ ನಡೆದಿದ್ದು, ಆತನ ಮೃತದೇಹವೂ ಮಂಗಳವಾರ ಪತ್ತೆಯಾಗಿದೆ.
ಬೀದರ್ ಜಿಲ್ಲೆ ಚಿಟಗುಪ್ಪಾ ಗ್ರಾಮದ ಶಂಕರ್ ಚಿಮ್ಮನಚೋಡ (58) ಆತ್ಮಹತ್ಯೆ ಮಾಡಿಕೊಂಡ ರೈತರಾಗಿದಾರ ಎಂದು ತಿಳಿದುಬಂದಿದೆ.
ಖಾಸಗಿ ಮತ್ತು ಬ್ಯಾಂಕ್ನಲ್ಲಿ 5 ಲಕ್ಷ ಸಾಲ ಮಾಡಿಕೊಂಡಿದ್ದ ಶಂಕರ್ಗೆ ಸಾಲ ತೀರಿಸುವಂತೆ ಒತ್ತಡ ಹೇರಲಾಗಿತ್ತು. ಆದರೆ ಸಾಲ ತೀರಿಸಲಾಗದೇ ರೈತ ಶಂಕರ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.