ಕಲಬುರಗಿ: ದರ್ಗಾದಲ್ಲಿ ಇಟ್ಟಿದ್ದ 140 ಗ್ರಾಮ ಬಂಗಾರ ಕಳ್ಳತನವಾಗಿರುವ ಘಟನೆ, ಕಲಬುರಗಿ ಜಿಲ್ಲೆಯ ಅಫಜಲಪುರ್ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲೀರೋ ಹಜರತ್ ಲಾಲಸಾಹೇಬ್ ಮೌಲಾಲಿ ದರ್ಗಾದಲ್ಲಿನ ಲಾಕರ್ ಒಡೆದು ಮೊಹರಂ ದೇವರ ಆಭರಣಗಳನ್ನು ಕಳ್ಳತನ ಮಾಡಲಾಗಿದೆ.
ಸ್ಥಳಕ್ಕೆ ಗಾಣಗಾಪುರ್ ಪೊಲೀಸರು ಹಾಗು ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಕುರಿತು ದೇವಲ ಗಾಣಗಾಪುರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.