ಕಲಬುರಗಿ: ಚಿಂಚೋಳಿ ತಾಲೂಕು ಘಟಕದ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆ) ವತಿಯಿಂದ ವೆಂಕಟಾಪುರ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರವಿ ರಾಠೋಡ್ ಅವರು ವೆಂಕಟಾಪುರ ಗ್ರಾಮ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಜೊತೆಗೆ ಕುಮಾರ್ ಚವಾಣ್, ಸುನಿಲ್ ರಾಠೋಡ್ ಮತ್ತು ರಾಹುಲ್ ಸಿ. ರಾಠೋಡ್ ಅವರನ್ನು ಸಹ ಘಟಕದ ಸದಸ್ಯರಾಗಿ ಆಯ್ಕೆ ಮಾಡಲಾಯಿತು ಎಂದು ಕರವೇ ಸ್ವಾಭಿಮಾನಿ ಸೇನೆಯ ಚಿಂಚೋಳಿ ತಾಲೂಕು ಅಧ್ಯಕ್ಷರಾದ ಲಿಂಬಾಜಿ ಚವಾಣ್ ತಿಳಿಸಿದ್ದಾರೆ.