ಕಲಬುರಗಿ: ಆಳಂದ ತಾಲೂಕ ಪಂಚಾಯಿತಿಯ ಆಶ್ರಯದಲ್ಲಿ ಶುಕ್ರವಾರ ಭಾರತ ಸುಗಮ್ಯ ಯಾತ್ರೆ 2025ನೇ ಸಾಲಿನ ವಿಶ್ವ ಸುಲಭ ಲಭ್ಯತೆ ಅರಿವು ಜಾಥಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಿತು.
ಈ ಜಾಥಾ ತಾಲೂಕ ಪಂಚಾಯಿತಿ ಕಚೇರಿಯಿಂದ ಆರಂಭಗೊoಡು ಬಸ್ ನಿಲ್ದಾಣದವರೆಗೆ ಸಾಗಿ, ವಿಕಲಚೇತನರಿಗೆ ಸ್ನೇಹಿ ವಾತಾವರಣ ಮತ್ತು ಸಮಾನತೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.
ಕಾರ್ಯಕ್ರಮದ ಮುಖ್ಯ ಉದ್ದೇಶವು ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ವಿಕಲಚೇತನರಿಗೆ ಸುಲಭವಾಗಿ ಒದಗಿಸಬೇಕಾದ ಮೂಲ ಸೌಕರ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದಾಗಿತ್ತು. ವಿಕಲಚೇತನರಿಗೆ ಭೇದಭಾವ ರಹಿತ ವಾತಾವರಣವನ್ನು ಸೃಷ್ಟಿಸಿ, ಅವರಿಗೆ ಗೌರವ, ಘನತೆ ಮತ್ತು ಸಮಾನ ಅವಕಾಶಗಳನ್ನು ಒದಗಿಸಬೇಕು ಎಂಬ ಸಂದೇಶವನ್ನು ಈ ಜಾಥಾ ಪ್ರತಿಪಾದಿಸಿತು.
ವಿಕಲಚೇತನರ ಕಾಯಿದೆಯನ್ನು ಗೌರವಿಸುವುದು, ಅವರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಮತ್ತು ಸಮಾಜದಲ್ಲಿ ಅವರಿಗೆ ಗೌರವದಿಂದ ಬದುಕಲು ಅವಕಾಶ ನೀಡುವುದರ ಮಹತ್ವವನ್ನು ಒತ್ತಿ ಹೇಳಲಾಯಿತು. “ವಿಕಲಚೇತನರಿಗೆ ಹಸಿವಾಸನೆ ತೋರದೆ, ಅವರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಿ, ಘನತೆಯ ಬದುಕಿಗೆ ದಾರಿ ಮಾಡಿಕೊಡಬೇಕು” ಎಂಬ ಘೋಷಣೆಗಳು ಕಾರ್ಯಕ್ರಮದ ಸಂದರ್ಭದಲ್ಲಿ ಕೇಳಿಬಂದವು.
ತಾಲೂಕ ಪಂಚಾಯಿತಿಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕರು ಈ ಜಾಥಾದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವು ಸಾರ್ವಜನಿಕರಲ್ಲಿ ಉತ್ಸಾಹ ಮೂಡಿಸಿತು ಮತ್ತು ವಿಕಲಚೇತನರಿಗೆ ಸ್ನೇಹಿ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಯಿತು.
ಈ ಜಾಥಾ ಮೂಲಕ, ಆಳಂದ ತಾಲೂಕ ಪಂಚಾಯಿತಿಯು ವಿಕಲಚೇತನರ ಕಲ್ಯಾಣಕ್ಕಾಗಿ ತನ್ನ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಿತು. ಸಮಾಜದ ಎಲ್ಲ ವರ್ಗಗಳ ಜನರಿಗೆ ಈ ಕಾರ್ಯಕ್ರಮವು ವಿಕಲಚೇತನರಿಗೆ ಸಮಾನತೆ ಮತ್ತು ಗೌರವದ ಮಹತ್ವದ ಅರಿವು ಮೂಡಿಸಲಾಯಿತು.
ಜಾಥಾವನ್ನು ಆರಂಭದಲ್ಲಿ ತಾಪಂ ಸಿಬ್ಬಂದಿ ಮಲ್ಲಿನಾಥ ಮತ್ತು ಪಿಡಿಒ ಮಂಜೂರ ಪಟೇಲ್ ಅವರು ಚಾಲನೆ ನೀಡಿದರು.
ಆಳಂದ ತಾಲೂಕು ವಿಆರ್ಡಬ್ಲೂ, ಎಂಆರ್ಡಬ್ಲೂ, ಯುಆರ್ಡಬ್ಲೂ ಸದಸ್ಯರುಗಳಾದ ಮುಖಂಡ ಮಲ್ಲಿಕಾರ್ಜುನ ಪಿ ಕಟ್ಟಿಮನಿ, ಶರಣು ಕವಲಗಾ, ಹಣಮಂತರಾಯ ಸನಗುಂದಾ, ದಯಾನಂದ ಕೆಂಪೆ, ಶಿವಲಿಲಾ ಕಾಂಬಳೆ, ಮಲ್ಲಿಕಾರ್ಜುನ ಪಾಟೀಲ, ಗುಂಡೇರಾವ್ ಪಾಂಡ್ರೆ, ನಿಲಮ್ಮ ಕೇರಿ ಅಂಬಲಗಾ, ಸವಿತಾ ಸಾವಳೇಶ್ವರ, ಹಣಮಂತರಾಯ ಕೊಡಲಹಂಗರಗಾ, ಸೈಬಣ್ಣಾ ಮೇತ್ರಿ, ರುಕ್ಮುದ್ದೀನ್ ಪಾಲಾಪೂರೆ, ಶರಣಮ್ಮ ಮಠ, ರೂಪಶ್ರೀ ಗರಡಕರ್ ಸೇರಿ ಮತ್ತಿತರರು ಪಾಲ್ಗೊಂಡಿದ್ದರು.