ಕಲಬುರಗಿ: ರವಿವಾರ ಮಧ್ಯರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ಮನೆ ಕುಸಿದಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಲಿಂಗಾನಗರ ತಾಂಡಾದಲ್ಲಿ ನಡೆದಿದೆ.
ಅನುಷಾಬಾಯಿ ಮೋಹನ್ ಎಂಬುವವರಿಗೆ ಸೇರಿದ ಮನೆಯೇ ಕುಸಿದಿದ್ದು, ಮನೆಯಲ್ಲಿನ ಅಪಾರ ವಸ್ತುಗಳು ಜಖಂಗೊಂಡಿವೆ.

ಕಳದೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನೀರಿಗೆ ನೆನೆದು ಮನೆ ಕುಸಿದುಬಿದ್ದಿದೆ.
ಮನೆ ಕಳೆದುಕೊಂಡ ಮಹಿಳೆ ಅನುಷಾಬಾಯಿ ಹಾಗೂ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಕೂಡಲೇ ಪರಿಹಾರ ಘೋಷಿಸಬೇಕೆಂದು ನೆರೆಯ ನಿವಾಸಿಗಳು ಚಿಂಚೋಳಿ ತಹಸೀಲ್ದಾರ್ ಅವರಿಗೆ ಒತ್ತಾಯಿಸಿದ್ದಾರೆ.