ಕಲಬುರಗಿ: ನಗರದ ಪಿ.ಎನ್.ಟಿ. ಕ್ವಾಟರ್ಸ್ ನ ಸದಾಶಿವ ನಗರದಲ್ಲಿ ಅಂಡಗಿ ಪ್ರತಿಷ್ಠಾನ ಟೆಂಗಳಿ ವತಿಯಿಂದ ವಿಶ್ವ ಕುಟುಂಬ ವೈದ್ಯರ ದಿನಾಚರಣೆ ನಿಮಿತ್ತ 5 ಜನ ವೈದ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಡಾ. ಸಚ್ಚಿದಾನಂದ ಕೊಡುಗೆ ಬೀದರ್, ಡಾ. ಅಶ್ವೀನಿ ವ್ಹಿ. ಪುಣೆೆ, ಡಾ. ಪ್ರಶಾಂತ ಪುಣ್ಯಶೆಟ್ಟಿ ಏಮ್ಸ್ ದಿಲ್ಲಿ, ಡಾ. ಅನುಪ್ ನಿಷ್ಟಿ ಕಿದ್ವಾಯಿ ಬೆಂಗಳೂರು, ಡಾ. ಸುಪ್ರಿಯಾ ಕೆ.ಬಿ ಅವರನ್ನು ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ, ವಿನೋದ ಕುಮಾರ ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಸದಾಶಿವ ನಗರದ ಶ್ರೀ ಗಣೇಶ ಮಂದಿರ ಅಧ್ಯಕ್ಷರಾದ ನಿವೃತ್ತ ಎ.ಇ.ಇ. ಹಾವೇಂದ್ರ ಪುಣ್ಯಶೆಟ್ಟಿ, ಬಸವರಾಜ ಎನ್. ಪುಣ್ಯಶೆಟ್ಟಿ, ಮಲ್ಲಿಕಾರ್ಜುನ ಕಾಂಬಳೆ, ವಿಜಯಕುಮಾರ ಟಕ್ಕಳಕಿ, ಜಗದೀಶ ಮಾಲಿ, ರಿತೀಶ ರೆಡ್ಡಿ, ಅಖಿಲ್ ರಾಯಕೋಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.