ಕಲಬುರಗಿ| ಸುಲೇಪೇಟ ಗ್ರಾಮದಲ್ಲಿ ಬಾಬೂಜಿ ಮೂರ್ತಿ ಸ್ಥಾಪನೆ: ಡಾ. ಶರಣಪ್ರಕಾಶ ಪಾಟೀಲ ಭರವಸೆ

Date:

Share post:

ಕಲಬುರಗಿ: ಸುಲೇಪೇಟ ಗ್ರಾಮದಲ್ಲಿ ಡಾ.ಬಾಬು ಜಗಜೀವನ ರಾಮ್ ಅವರ ಮೂರ್ತಿಯನ್ನು ಬರುವ ದಿನಗಳಲ್ಲಿ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ಭರವಸೆ ನೀಡಿದರು.

ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಎಸ್ಟಿ ಭವನದಲ್ಲಿ ಹಮ್ಮಿಕೊಂಡ ಡಾ.ಬಾಬು ಜಗಜೀವನ ರಾಮ್ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸುಲೇಪೇಟ ಗ್ರಾಮದ ಮಾದಿಗ ಸಮಾಜದ ಮುಖಂಡರು ಗ್ರಾಮದಲ್ಲಿ ಒಂದು ಭವನ ಮತ್ತು ಮೂರ್ತಿ ಪ್ರತಿಷ್ಟಾಪನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ, ಬರುವ ದಿನಗಳಲ್ಲಿ ಅವರ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದರು.

ನನ್ನ ಮತಕ್ಷೇತ್ರದಲ್ಲಿ ಯಾವುದೇ ಸಮಾಜದ ಮೇಲೆ ದೌರ್ಜನ್ಯ ನಡದಿಲ್ಲ, ನಾನು ಯಾವಾಗಲೂ ಜಾತಿ ಮತ ಪಕ್ಷ ಮಾಡಿಲ್ಲ ನಾನು ಮಾಡಲ್ಲ ನಮ್ಮ ಸರಕಾರ ಕೂಡ ಮಾಡಲ್ಲ, ನಾನು ಬಸವಣ್ಣ ತತ್ವ ಆದರ್ಶ ಮೇಲೆ ನಡೆಯುತ್ತೇನೆ, ಬಸವಣ್ಣ ಅವರ ಹಾಕಿದ ತಳಹಾದಿ ಮೇಲೆ ನಡೆಯುವ ನಮ್ಮ ಸರಕಾರ ಇದೆ. ಬಾಬೂಜಿ ಅವರು ಭಾರತ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಅವರು ತಮಗಾಗಿ ಬೆಳೆಯದೆ ಸಮಾಜಕ್ಕಾಗಿ ಹೋರಾಟ ಮಾಡಿ ನಮಗೆ ಪ್ರೇರಣೆ ನೀಡಿದ್ದಾರೆ ಅವರ ತತ್ವ ಆದಾರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಳಬೇಕು ಎಂದರು.

ಮಾಜಿ ಶಾಸಕ ರಾಜಕುಮಾರ ಪಾಟೀಲ ಮಾತನಾಡಿ, ಭಾರತದ ಕೃಷಿಯಲ್ಲಿ ಮಹತ್ತರವಾದ ಬದಲಾವಣೆಯನ್ನು ಮಾಡಿ, ಕೃಷಿಯನ್ನು ಉನ್ನತೀಕರಣ ಸೃಷ್ಟಿಸಿದ ಡಾ. ಬಾಬು ಜಗಜೀವನರಾಂ ಅವರು ಹಸಿರು ಕಾಂತ್ರಿಯ ಹರಿಕಾರರು ಭಾರತ ದೇಶಕ್ಕೆ ಅವರ ಕೊಡಗುಗೆ ಅಪಾರವಾಗಿದೆ ಎಂದರು.

ಈ ಸಂದರ್ಭದಲ್ಲಿ ಚಿಂಚೋಳಿ ಶಾಸಕ ಡಾ ಅವಿನಾಶ್ ಜಾಧವ , ಬಾಲರಾಜ ಗುತ್ತೇದಾರ್, ಗೋಪಾಲರಾವ ಕಟ್ಟಿಮನಿ ಮಾತನಾಡಿದರು.

ದೋಡೇಂದ್ರ ಸ್ವಾಮಿಗಳು, ಜಯಂತಿ ಸಮಿತಿಯ ಅಧ್ಯಕ್ಷ ವಿನೋದ ಕುಮಾರ್, ಗೋಪಾಲರಾವ ಕಟ್ಟಿಮನಿ, ಮಹಾರುದ್ರಪ್ಪ ದೇಸಾಯಿ, ಬಸವರಾಜ ಸಜ್ಜನ, ತಾಹೇರ ಪಟೇಲ, ಅತೀಷ ಪವಾರ, ಮೇಘರಾಜ ರಾಠೋಡ್, ಮಸ್ತಾನ ಅಲಿ ಪಟ್ಟೆದ್ದಾರ, ಬಸವರಾಜ ಬಿರಾದಾರ, ಚಾಂದಪಾಶಾ ಮೋಮಿನ, ಆನಂದ ಟೈಗರ್, ರೇವಣಸಿದ್ದಪ್ಪ ಅಣಕಲ್, ಸಂತೋಷ ರಾಠೋಡ್, ಶಿವಕುಮಾರ್ ಕೊತ್ತಪೇಟ, ಬಾಬಣ್ಣ ಗುಲಗುಂಜಿ, ವಿಜಯಕುಮಾರ್ ಕೋರಡಂಪಳ್ಳಿ, ಸಂಪತ ಬೆಳ್ಳಿಚುಕ್ಕಿ, ಸುನೀಲ ಸಲಗಾರ್, ಅಮರೇಶ ಗೋಣಿ,ನಸೀರ ಹುಸ್ಸೇನ್ ಮದರಗಿ, ರಾಜಕ ಪಟೇಲ್, ಶಿವಕುಮಾರ್ ಸಜ್ಜನ , ಸುನೀಲ ಕಪೂರ್, ಆಕಾಶ ಕೊಳ್ಳೂರ್ ಇತರರು ಕಾರ್ಯಕ್ರಮದಲ್ಲಿ ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಪಂಚಮಸಾಲಿ ಹೋರಾಟದ ವಿರುದ್ಧ ಹಲ್ಲೆ ಮಾಡಿದ್ದನ್ನು ಸರಕಾರ ಮುಚ್ಚಿಹಾಕಲು ಯತ್ನ: ಜಯಮೃತ್ಯುಂಜಯ ಸ್ವಾಮೀಜಿ ಆರೋಪ

ಕಲಬುರಗಿ: ಬೆಳಗಾವಿಯಲ್ಲಿ ಮೀಸಲಾತಿ ನೀಡುವಂತೆ ನಡೆಸಿದ ಹೋರಾಟದ ಸಂದರ್ಭದಲ್ಲಿ ದೀಕ್ಷ ಪಂಚಮಸಾಲಿ...

ಕಲಬುರಗಿ| ಜಿಲ್ಲಾದ್ಯಂತ ಸಂಭ್ರಮದ ಬಕ್ರೀದ್ ಆಚರಣೆ

ಕಲಬುರಗಿ: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಈದುಲ್ ಅಝ್ ಹಾ (ಬಕ್ರೀದ್)...

ಕಲಬುರಗಿ| ಕಾಲ್ತುಳಿತಕ್ಕೆ ಕಾಂಗ್ರೆಸ್ ಸರಕಾರವೇ ನೇರಹೊಣೆ: ಮರತೂರಕರ್ ಆರೋಪ

ಕಲಬುರಗಿ: ಹದಿನೆಂಟು ವರ್ಷದ ನಂತರ ಆರ್‌ಸಿಬಿ ಟ್ರೋಫಿ ಗೆದ್ದಿರುವುದು ನಾಡಿನ ಜನತೆಗೆ...

ಕಲಬುರಗಿ | ಗೋದುತಾಯಿ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಉದ್ಘಾಟನೆ

ಕಲಬುರಗಿ : ಮಾನವ ಸಂತೋಷ, ಮೋಜು ಮಸ್ತಿಗಾಗಿ ಪರಿಸರವನ್ನು ಮನಬಂದoತೆ ಹಾಳು...