ಕಲಬುರಗಿ: ಯಾವುದರೊಂದು ಸಂಸ್ಥೆಯು ತನ್ನ ಬೆಳವಣಿಗೆ ಆಗಬೇಕಾದರೆ ಅದು ಸಾಮಾಜಿಕ ಜಾಲತಾಣಗಳನ್ನು ಸದ್ಬಳಕೆ ಬಹಳಷ್ಟು ದೊಡ್ಡ ಪಾತ್ರ ವಹಿಸುತ್ತವೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ 12 ಅಂಶಗಳ ಸಂಯೋಜಕಿ ಡಾ.ಉಮಾ ರೇವೂರ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಲ್ಲ ಶಿಕ್ಷಣ ಸಂಸ್ಥೆಯ ಸಾಮಾಜಿಕ ಜಾಲತಾಣಗಳ ಸಂಯೋಜಕರ ಸಭೆಯಲ್ಲಿ ಮಾತನಾಡುತ್ತಿದ್ದರು.
ಮಾನವ ಸಂವಹನಗಳ ಮನವೊಲಿಸುವ ಭಾಗಗಳಲ್ಲಿ ಒಂದಾದ ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತವೆ, ಮಾನವರಾದ ನಾವು ಅವುಗಳ ಬಳಕೆಯಿಲ್ಲದೆ ಒಂದು ದಿನವನ್ನು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದರು.
ಇದು ಸ್ಪರ್ಧಾತ್ಮಕ ಯುಗ ಒಂದು ಸಂಸ್ಥೆ ಸದೃಢವಾಗಿ ಬೆಳೆಯಬೇಕಾದರೆ ಸಾಮಾಜಿಕ ಜಾಲತಾಣಗಳ ಸದ್ಭಳಕೆ ಯಿಂದ ಸಾಧ್ಯ. ನಾವು ಅನೇಕ ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆ. ಆ ಕೆಲಸಗಳು ಸಮಾಜಕ್ಕೂ ತಿಳಿಸಬೇಕಾಗಿರುವದು ನಮ್ಮ ಆದ್ಯ ಕರ್ತವ್ಯ. ಪತ್ರಿಕಾ ಮಾಧ್ಯಮದ ಜೊತೆ ನಾವು ಸಾಮಾಜಿಕ ಜಾಲತಾಣಗಳ ಸರಿಯಾಗಿ ಬಳಸಿಕೊಂಡಾಗ ಜನತೆಗೆ ತಿಳಿಸಲು ಸಹಾಯವಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ವಿಶೇಷಾಧಿಕಾರಿ ಪರಮೇಶ್ ಬಿರಾದಾರ ಮಾತನಾಡಿ, ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳು ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಅನೇಕ ಕಡಿಮೆ-ತಿಳಿದಿರುವ ಪ್ಲಾಟ್ಫಾರ್ಮ್ಗಳಂತಹ ಸಂಪರ್ಕಿಸುವ ವೆಬ್ಸೈಟ್ಗಳನ್ನು ಒಳಗೊಂಡಿರುತ್ತವೆ. ಸಾವಿರ ಮೈಲುಗಳಷ್ಟು ದೂರದಲ್ಲಿರುವ ಜನರೊಂದಿಗೆ ಸಂಪರ್ಕ ಸಾಧಿಸಲು ಈ ವೆಬ್ಸೈಟ್ಗಳು ವ್ಯಕ್ತಿಗೆ ಸಹಾಯ ಮಾಡುತ್ತವೆ. ಸಂದೇಶಗಳಿಗೆ ಸಂವಹನ ಮಾರ್ಗಗಳು ಬಹುಮಟ್ಟಿಗೆ ಸುಲಭವಾಗಿದೆ. ಹೊಸ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಲಕರೆಡ್ಡಿ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಸಾಗರ, ಸಂಸ್ಥೆಯ ಪತ್ರಿಕಾ ಮಾಧ್ಯಮದ ಸಂಚಾಲಕ ಐ.ಕೆ ಪಾಟೀಲ್ ಉಪಸ್ಥಿತರಿದ್ದರು.