ಕಲಬುರಗಿ: ವಿದ್ಯುತ್ ಸ್ಥಾವರದ ಬೇಲಿ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಸಂತ್ರಾಸವಾಡಿ ಬಳಿಯ ನಡೆದಿದೆ.
ಜಾವೀದ್ ತಂದೆ ಅಮಿನಸಾಬ ಇನಾಮದಾರ ಮೃತಪಟ್ಟ ದುರ್ದೈವಿ ಎಂದು ತಿಳಿದುಬಂದಿದೆ.
ಮನೆಗೆ ಬಣ್ಣ ಹಚ್ಚುವ ಕೆಲಸ ಮುಗಿಸಿ ಜಾವೀದ್ ಮನೆಗೆ ಬರುತ್ತಿದ್ದಾಗ ಸ್ಥಾವರದ ಬೇಲಿ ತಂತಿ ತಗುಲಿ ಮೃತಪ ಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಹೋದರನ ಸಾವಿಗೆ ಜೆಸ್ಕಾಂ ನಿರ್ಲಕ್ಷವೇ ಕಾರಣ ಎಂದು ಮೃತ ಜಾವೀದ್ ಸಹೋದರ ಜಮೀಲ್ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಮೇರೆಗೆ ಬ್ರಹ್ಮಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.