ಕಲಬುರಗಿ: ವಧು- ವರರ ಸಮಾವೇಶಗಳು ವಿಶ್ವಸನೀಯ ಸಂಬಂಧಗಳನ್ನು ಬೆಳೆಸಲು ಸಹಾಯಕ ವಾಗುತ್ತಿವೆ’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಅಭಿಪ್ರಾಯಪಟ್ಟರು.
ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದ ಅನುಭವ ಮಂಟಪದಲ್ಲಿ ಶರಣಬಸವೇಶ್ವರ ಸಂಸ್ಥಾನ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಶಿವಪಾರ್ವತಿ ಮ್ಯಾಟ್ರಿಮೋನಿಯಲ್ ಆಯೋಜಿಸಿದ್ದ ರಾಜ್ಯಮಟ್ಟದ ವಧು-ವರರ ಸಮಾವೇಶದಲ್ಲಿ ಅವರು ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜದಲ್ಲಿ ವಧು ಮತ್ತು ವರರ ಸಮಸ್ಯೆ ಹೆಚ್ಚಾಗುತ್ತಿದೆ. ಸಮಾವೇಶಗಳು ಸಂಬಂಧಗಳನ್ನು ಬೆಸೆದು ಬಂಧಗಳು ವೃದ್ಧಿಸುವಂತೆ ಆಗಲಿ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಮುಖಂಡರಾದ ಅರುಣಕುಮಾರ ಪಾಟೀಲ, ಸೋಮಶೇಖರ ಹಿರೇಮಠ, ಕಲ್ಯಾಣಪ್ಪ ಪಾಟೀಲ, ಕಲ್ಯಾಣರಾವ ಯಲಮಡಗಿ, ವೀರೇಶ ಗಂಧದಮಠ, ಗುರುಪಾದಪ್ಪ ಪಲ್ಲಕ್ಕಿ, ಚಂದ್ರಶೇಖರ ಆಕಕ್ಕೇರಿ, ಸಂಜೀವಕುಮಾರ, ರವಿ ಆಲಗೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.