ಕಲಬುರಗಿ: ಮೇ 18 ರಿಂದ ಮೇ20 ರವರೆಗೆ ಶಿವಮೊಗ್ಗದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಗುಲ್ಬರ್ಗಾ ಜಿಲ್ಲಾ ಬಾಸ್ಕೆಟ್ ಬಾಲ್ ತಂಡಕ್ಕೆ ಹಲವರು ಶುಭ ಹಾರೈಸಿದ್ದಾರೆ.
ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಉದನೂರು ಹಾಗೂ ಉಪಾಧ್ಯಕ್ಷರಾದ ಚಂದ್ರಕಾಂತ್ ಶಿರೋಳಿ ಅವರು ತಂಡದ ಆಟಗಾರರಿಗೆ ಆತ್ಮವಿಶ್ವಾಸ ತುಂಬಿ, ಉತ್ತಮ ಪ್ರದರ್ಶನ ತರುವಂತೆ ಶುಭ ಹಾರೈಸಿದ್ದಾರೆ.
*ಎಡದಿಂದ ನಿಂತವರು: ಧನಂಜಯ ಬೆನ್ನೂರ್, ಜಾವಿದ್ ಅಖ್ತರ್, ಬಸವರಾಜ ಬೆಳುಂಡಗಿ (ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರು), ಪ್ರವೀಣ್ ಪುಣೆ (ಜಿಲ್ಲಾ ಬಾಸ್ಕೆಟ್ ಬಾಲ್ ತರಬೇತುದಾರರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ), ಶಶಿಕಾಂತ್ ಕಮಲಾಪುರ್ (ತಂಡದ ನಾಯಕ), ಡಾ. ಶಂಕರ್ ಸೂರೆ, ರಾಜೇಶ್ ಅಜಬ ಸಿಂಗ್, ವಿಜಯಕುಮಾರ್ ಸಿಂದಗಿ, ಕುಳಿತವರು ಎಡದಿಂದ: ಆಕಾಶ್ ಸಜ್ಜನ್, ಡಾ. ನಾಗರೆಡ್ಡಿ, ಡಾ. ಅವಿನಾಶ್ ಕಂಠಿಕರ್ ಇದ್ದರು.