ಕಲಬುರಗಿ| ಬಿಜೆಪಿ ಯುವ ಮೋರ್ಚಾ ವತಿಯಿಂದ ಪರಿಸರ ದಿನಾಚರಣೆ

Date:

Share post:

ಕಲಬುರಗಿ: ಪರಿಸರ ಸಂರಕ್ಷಣೆ, ಹೆಚ್ಚು ಸಸಿಗಳನ್ನು ನೆಡುವುದು ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ನಿಮಿತ್ತವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಕಲಬುರಗಿ ನಗರದ ಐವಾನ್ ಶಾಹಿಯಲ್ಲಿ ಸಸಿಗಳನ್ನು ನೆಟ್ಟಿ ಅವರು ಮಾತನಾಡಿದರು.

ಮುಂದುವರಿದು ಮಾತನಾಡಿ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅರಣ್ಯ ಕೇವಲ 10% ಇದ್ದು ಇದರಿಂದ ಈ ಭಾಗದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಅದರಲ್ಲೂ ವಿಶೇಷವಾಗಿ ನಮ್ಮ ಕಲಬುರಗಿ ಜಿಲ್ಲೆಯಲ್ಲಿ ಪರಿಸರಕ್ಕೆ ನಾವೆಲ್ಲರೂ ಒತ್ತು ಕೊಡಬೇಕಾಗಿದೆ, ಹೊಲಗಳಲ್ಲಿ ಸರ್ಕಾರಿ ಗೈರಾಣ ಭೂಮಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಮರಗಳನ್ನು ನೆಡುವ ಮೂಲಕ ಪರಿಸರ ಹಸಿರುಮಯವಾಗಿಸಬೇಕಿದೆ ಮತ್ತು ಈ ನಿಟ್ಟಿನಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ ಎಂದರು.

ನಗರ ಜಿಲ್ಲಾ ಅಧ್ಯಕ್ಷ ಮಹೇಶ್ ಚವ್ಹಾಣ ಮಾತನಾಡಿ, ಮರಗಳನ್ನು ನೆಡುವುದು ಅವುಗಳನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ ಕೇವಲ ಒಂದು ದಿನಕ್ಕೆ ಸೀಮಿತವಾಗಿದೆ ನಿರಂತರವಾಗಿರಲಿ ಎಂದರು.

ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರೀತಮ್ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಚೆನ್ನು ಭಂಗೆ, ಶರಣು ಲೇಂಗಟಿ, ಉಪಾಧ್ಯಕ್ಷರಾದ ಶಿವಲಿಂಗ ಪಾಟೀಲ್, ಸೌರಭ್ ರಂಗದಾಳ, ಕಾರ್ಯದರ್ಶಿಗಳಾದ ನಾರಾಯಣ ಜಾಹಾಗೀರದಾರ, ನಾರಾಯಣ ಜಾಕೀರ್ದಾರ್, ಸಚಿನ ಬನ್ನಿ, ಮುಖಂಡರಾದ ಅಮಿತ್ ಕುಲಕರ್ಣಿ, ನಿಜಗುಣಗೌಡ ಯಲಗೋಡ, ಡಾ. ಅಭಿ ಅವರಾದಿ, ದರ್ಶನ್ ಬಾಸುತಕರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಕಲಬುರಗಿ: ವಿದ್ಯುತ್‌ ಸ್ಥಾವರದ ಬೇಲಿ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ...

ಕಲಬುರಗಿ| ವರ್ತಮಾನದ ವಿಷಯಗಳೇ ಕಥಾ ವಸ್ತುವಾಗಬೇಕು: ಡಾ. ಲೋಕಾಪೂರ

ಕಲಬುರಗಿ : ಕನ್ನಡ ಕಥಾ ರಚನೆಯಲ್ಲಿ ತೊಡಗಿರುವ ಕಥೆಗಾರರು ವರ್ತಮಾನದ ನೈಜ...

ಕಲಬುರಗಿ| ಭೀಮಾ ನದಿಯಲ್ಲಿ ಈಜಾಡಲು ತೆರಳಿದ್ದ ಯುವಕ ನಾಪತ್ತೆ

ಕಲಬುರಗಿ: ಭೀಮಾ ನದಿಯಲ್ಲಿ ಈಜಾಡಲು ತೆರಳಿದ್ದ ಯುವಕ ನಾಪತ್ತೆಯಾಗಿರುವ ಘಟನೆ ಶನಿವಾರ...

ಕಲಬುರಗಿ| ಪಂಚಮಸಾಲಿ ಹೋರಾಟದ ವಿರುದ್ಧ ಹಲ್ಲೆ ಮಾಡಿದ್ದನ್ನು ಸರಕಾರ ಮುಚ್ಚಿಹಾಕಲು ಯತ್ನ: ಜಯಮೃತ್ಯುಂಜಯ ಸ್ವಾಮೀಜಿ ಆರೋಪ

ಕಲಬುರಗಿ: ಬೆಳಗಾವಿಯಲ್ಲಿ ಮೀಸಲಾತಿ ನೀಡುವಂತೆ ನಡೆಸಿದ ಹೋರಾಟದ ಸಂದರ್ಭದಲ್ಲಿ ದೀಕ್ಷ ಪಂಚಮಸಾಲಿ...