ಕಲಬುರಗಿ| ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧತೆ: ಸಂಭಾವ್ಯ 157 ಗ್ರಾಮಗಳಿಗೆ ನೋಡಲ್ ಅಧಿಕಾರಿ ನೇಮಿಸಿ ಜಿಲ್ಲಾಧಿಕಾರಿ ಆದೇಶ

Date:

Share post:

ಕಲಬುರಗಿ: ಪ್ರಸಕ್ತ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ ಸಂಭವಿಸಬಹುದೆಂದು ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಳೆಯಿಂದ ಪ್ರವಾಹ, ಅತಿವೃಷ್ಠಿ ಉಂಟಾದಲ್ಲಿ ತುರ್ತು ಪರಿಹಾರಕ್ಕೆ ಮತ್ತು ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಜಿಲ್ಲೆಯ ಭೀಮಾ ಮತ್ತು ಕಾಗಿಣಾ ನದಿ ಪಾತ್ರದ ಸುಮಾರು 157 ಸಂಭಾವ್ಯ ಪ್ರವಾಹ ಪೀಡಿತ ಗ್ರಾಮಗಳಿಗೆ 27 ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಬಿ.ಫೌಜಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ.

 

ನೇಮಕ ಮಾಡಲಾದ ನೋಡಲ್ ಅಧಿಕಾರಿಗಳು ಭೀಮಾ ಮತ್ತು ಕಾಗಿಣಾ ನದಿಯ ಪ್ರದೇಶಗಳಲ್ಲಿರುವ ಜಲಾಶಯಗಳ ನೀರಿನ ಮಟ್ಟ ಸಂಗ್ರಹಣಾ, ಒಳಹರಿವು ಮತ್ತು ಹೊರ ಹರಿವು ಮಾಹಿತಿ ಕ್ಷಣ-ಕ್ಷಣದ ಮಾಹಿತಿಯನ್ನು ಪಡೆದುಕೊಂಡು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮ ವಹಿಸಲು ತಿಳಿಸಬೇಕು. ಪ್ರವಾಹ ಸಂಭವಿಸಿದಲ್ಲಿ ಗ್ರಾಮದ ಜನ ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಕಾಳಜಿ ಕೇಂದ್ರಗಳು ತೆರೆದು ಅವರಿಗೆ ಊಟೋಪಚಾರ ಉಸ್ತುವಾರಿ ನೋಡಿಕೊಳ್ಳುವಂತೆ ತಿಳಿಸಲಾಗಿದೆ.

 

ಇದಲ್ಲದೆ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರು, ಪಿ.ಡಿ.ಓ, ವಿ.ಎ.ಓ ಜೊತೆ ಸಮನ್ವಯದೊಂದಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವ ಸಂತ್ರಸ್ಥರಿಗೆ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟ ಪೂರೈಕೆ, ಎನ್.ಡಿ.ಆರ್.ಎಫ್/ ಎಸ್.ಡಿ.ಆರ್.ಎಫ್ ನಿಯಮಾವಳಿಯಂತೆ ಸಂತ್ರಸ್ಥರಿಗೆ ತ್ವರಿತವಾಗಿ ಆರ್ಥಿಕ ನೆರವು ಒದಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

ತಾಲೂಕು ಮತ್ತು ಗ್ರಾಮವಾರು ನೇಮಿಸಲಾದ ನೋಡಲ್ ಅಧಿಕಾರಿಗಳ ವಿವರ ಮತ್ತು ಸಂಪರ್ಕ ಸಂಖ್ಯೆ ಹೀಗಿದೆ.

ಅಫಜಲಪೂರ: ತಾಲೂಕಿನ ಹೊಸೂರ, ಶೇಷಗಿರಿವಾಡಿ, ಮಣ್ಣೂರ, ದೇವಪ್ಪನಗರ, ಕೂಡಗನೂರ, ಶಿವೂರ ಗ್ರಾಮಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಸೋಮಶೇಖರ-9945229477, ಉಡಚಾಣ, ಹಿರಿಯಾಳ, ಭೋಸಗಾ, ದುದ್ದಣಗಿ, ಮಂಗಳೂರು ಗ್ರಾಮಗಳಿಗೆ ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ-9448999341, ಸೊನ್ನ(ಬ್ರಿಜ್ ಬ್ಯಾಕ್ ವಾಟರ್), ಬಳ್ಳೂಂಡಗಿ, ಅಳ್ಳಗಿ(ಕೆ), ಅಳ್ಳಗಿ(ಬಿ), ಶಿರವಾಳ ಗ್ರಾಮಗಳಿಗೆ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಎಸ್.ಎನ್.ಬಿರಾದಾರ-9480031575, ಭಂಕಲಗಾ, ಗೌರ(ಕೆ), ಗೌರ(ಬಿ), ದಿಕ್ಸಂಗಾ(ಕೆ), ತೆಲೋಣಿ ಗ್ರಾಮಗಳಿಗೆ ಆಹಾರ ಇಲಾಖೆಯ ಉಪನಿರ್ದೇಶಕ ಭೀಮರಾಯ-9686250017, ನಂದರಗಾ, ಜೇವರ್ಗಿ(ಕೆ), ಜೇವರ್ಗಿ(ಬಿ), ಬನ್ನೇಟ್ಟಿ, ಶಿವಪೂರ ಗ್ರಾಮಗಳಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಭು ದೊರೆ-9901444631, ಕೇಶಾಪೂರ, ಇಂಚಗೇರಾ, ಇಂಗಳಗಿ(ಕೆ), ಹವಳಗಾ, ಘತ್ತರಗಾ ಗ್ರಾಮಗಳಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ಶರಣಪ್ಪ-7204451771, ಕಲ್ಲೂರ, ಕೋಳನೂರ, ಗುಡ್ಡೇವಾಡಿ, ಘೋಳನೂರ, ಬಟಗೇರಾ, ಆನೂರ, ಬಿಳವಾಡ(ಬಿ), ಕೆಕ್ಕರಸಾವಳಗಿ ಗ್ರಾಮಗಳಿಗೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸಾಧಿಕ್ ಹುಸೇನ್-8867198972, ದೇವಲ ಗಾಣಗಾಪೂರ, ಬಂದರವಾಡ, ತೆಗ್ಗೆಳ್ಳಿ, ಸಿರಸಗಿ, ಟಾಕಳಿ, ತೆಲ್ಲೂರ, ಅವರಾದ ಗ್ರಾಮಗಳಿಗೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ನಾಗರಾಜ-9341347440, ಉಮರ್ಗಾ, ಸಾಗನೂರ, ಕಿರಸಾವಳಗಿ, ಚಿನ್ಮಳ್ಳಿ, ಕೆರಕನಹಳ್ಳಿ ಗ್ರಾಮಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ-9986110262.

 

ಜೇವರ್ಗಿ: ತಾಲೂಕಿನ ಅಂಕಲಗಾ, ಹುಲ್ಲೂರ, ಸಿದ್ನಾಳ, ಮೊಗನ ಇಟಗಾ, ಭೋಸಗಾ(ಕೆ), ಭೋಸಗಾ(ಬಿ), ಜಾಲಿಹಾಳ, ಹರನಾಳ ಕೆ., ಹಂಚನಾಳ ಎಸ್.ಎನ್. ಗ್ರಾಮಗಳಿಗೆ ಕರ್ನಾಟಕ ಗೃಹ ಮಂಡಳಿಯ ಕಲಬುರಗಿಯ ಇ.ಇ. ವಿಜಯಕುಮಾರ-8904712645, ಬ್ಯಾಡರಹಾಳ, ಬೇಲೂರ, ಕೂಡಲಗಿ, ಯಂಕಂಚಿ, ಮಾಹೂರ, ಕಲ್ಲೂರ(ಬಿ), ಗುಲ್ಲಿಹಾಳ(ಡಿ) ಗ್ರಾಮಗಳಿಗೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಸುರೇಶ-9449691254, ನೆಲೋಗಿ, ಕೂಟನೂರ, ಹರವಾಳ, ರಾಸಣಗಿ, ಹಂದನೂರ ಗ್ರಾಮಗಳಿಗೆ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಜಾವೀದ್ ಕರಂಗಿ-9449161217, ಬಣಮಿ, ಕೋಬಾಳ, ಕೂಡಿ, ಕೋಳಕೂರ, ರದ್ದೆವಾಡಗಿ, ಬಂದ್ರವಾಡ, ಹಿಪ್ಪರಗಾ ಕೋನ್, ಫಕ್ರುದ್ದಿನ ದರ್ಗಾ ಗ್ರಾಮಗಳಿಗೆ ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಗುಲಾಮ-8762353786, ಕಟ್ಟಿಸಂಗಾವಿ, ಬಂಟನಾಳ, ಚೆನ್ನೂರ, ಗುಡೂರ(ಎಸ್.ಎ), ಮದರಿ, ಯನಗುಂಟಿ, ಬಳವಡಗಿ ತಾಂಡಾ, ರಾಜವಾಳ, ನರಿಬೋಳ, ಮಲ್ಲಾ(ಕೆ) ಗ್ರಾಮಗಳಿಗೆ ರೇಷ್ಮೆ ಇಲಾಕೆಯ ಉಪನಿರ್ದೇಶಕ ರಮೇಶ ಬಾಬು-9986779314, ಹೊನ್ನಾಳ, ಹೊತ್ತಿನಮಡು, ಹಂಚನಾಳ(ಬಿ), ರಾಂಪೂರ, ನಾರಾಯಣಪೂರ, ಬಿರಾಳ(ಕೆ), ಬಿರಾಳ(ಬಿ) ಗ್ರಾಮಗಳಿಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಇ.ಇ. ಧನಂಜಯ-7676804049.

ಕಲಬುರಗಿ: ತಾಲೂಕಿನ ಮೈನಾಳ, ಹೆರೂರು-ಬಿ, ಬೆಳಗುಂಪಾ–ಕೆ, ಬಸವಪಟ್ಟಣ, ಔರಾದ–ಕೆ ಗ್ರಾಮಗಳೀಗೆ ಎನ್.ಎಚ್.ಎ.ಐ ವಿಭಾಗದ ಎಸ್.ಎಲ್.ಎ.ಓ ರಾಮಚಂದ್ರ ಗಡಾದೆ-9743334596, ಹಾಗರಗುಂಡಗಿ, ಸರಡಗಿ-ಬಿ, ನದಿಸಿನ್ನೂರ, ಫಿರೋಜಾಬಾದ, ಹಸನಾಪೂರ ಗ್ರಾಮಗಳಿಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎ.ಇ.ಇ. ಜಗದೇವಪ್ಪಾ-9986887077, ಸೋಮನಾಥಹಳ್ಳಿ, ನಡುವಿನಹಳ್ಳಿ, ಫರಹತಾಬಾದ ಗ್ರಾಮಗಳಿಗೆ ಡಿ.ಯು.ಡಿ.ಸಿ ಯೋಜನಾ ನಿರ್ದೇಶಕ ಮುನಾವರ ದೌಲ-9986108000, ತಾಡತೆಗನೂರ, ಕವಲಗಾ(ಕೆ), ಕವಲಗಾ(ಬಿ), ಗರೂರ (ಕೆ), ತಿಳಗೊಳ, ಬಳವಾಡ ಗ್ರಾಮಗಳಿಗೆ ತಾಲೂಕ ಪಂಚಾಯತ್ ಇ.ಓ. ಸೈಯದ್ ಪಟೇಲ್-9900290355.

ಚಿತ್ತಾಪುರ: ತಾಲೂಕಿನ ಕಡಳ್ಳಿ, ಹೊನ್ನಗುಂಟಾ, ಕೂಂದನೂರ, ಚಾಮನೂರ, ಬಲವಡಗಿ ಗ್ರಾಮಗಳಿಗೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗಂಗಾಧರ-9741695388, ಕಡಬೂರ, ಕೋಳ್ಕುಂದಾ, ತುರನೂರ, ಸೂಗೂರ ಎನ್., ಮಾರಡಗಿ ಗ್ರಾಮಗಳಿಗೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಪರಮೇಶ್ವರ-8073334178, ಕೊಳ್ಳೂರ, ಸನ್ನತಿ, ಕನಗನಹಳ್ಳಿ, ಹುಳಂಡಗೇರಾ, ಬನ್ನೆಟ್ಟಿ ಗ್ರಾಮಗಳಿಗೆ ಲೋಕೋಪಯೋಗಿ ಇಲಾಖೆಯ ಸೇಡಂ ವಿಭಾಗದ ಇ.ಇ. ಗಾಜರೆ-9591461212, ತರಕಸಪೇಟ, ರಾಂಪೂರ, ಮಳಗಿ(ಎನ್), ಇಂಗಳಗಿ, ಇಂಗಳಗಿ ತಾಂಡಾ, ಕದ್ದರಗಿ ಗ್ರಾಮಗಳಿಗೆ ಸಣ್ಣ ನೀರಾವರಿ ಇಲಾಖೆಯ ಇ.ಇ. ನಾಗಣಗೌಡ-9449160554, ಕಾಟಮದೇವರಹಳ್ಳಿ, ಭಾಗೋಡಿ, ಇವಣಿ, ಬೆಳಗುಂಪಾ, ದಂಡೋತಿ ಗ್ರಾಮಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮರಲಿಂಗ-9964644006.

ಶಹಾಬಾದ: ತಾಲೂಕಿನ ಶಂಕರವಾಡಿ, ಗೋಳಾ(ಕೆ), ಹೊನಗುಂಟಾ, ಮಾಲಗತ್ತಿ, ಶಹಾಬಾದ, ಜೀವಣಗಿ, ಮುತ್ತಗಾ ಗ್ರಾಮಗಳಿಗೆ ಡಿ.ಆರ್.ಸಿ.ಎಸ್. ಕಿಶೋರ ಪಾಟೀಲ-9902777816. *ಕಾಳಗಿ:* ತಾಲೂಕಿನ ಟೆಂಗಳಿ, ತೊನಸನಳ್ಳಿ, ಮಲಘಾಣ, ಡೊಣ್ಣೂರ, ಗೋಟೂರ ಗ್ರಾಮಗಳಿಗೆ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಗದೇವಪ್ಪ-9449985479, ಕಣಸೂರ, ಕಲಗುರ್ತಿ, ಹೆಬ್ಬಾಳ, ಕಲ್ಲಹಿಪ್ಪರಗಾ ಗ್ರಾಮಗಳಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಹೊಸಮನಿ-9886435185 ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

Share post:

spot_imgspot_img

Popular

More like this
Related

ಕಲಬುರಗಿ| ಅಕ್ರಮ ಗಾಂಜಾ ಮಾರಾಟ; 48 ಸಾವಿರ ಮೌಲ್ಯದ 3 ಕೆಜಿ ಗಾಂಜಾ ಜಪ್ತಿ

ಕಲಬುರಗಿ: ಮಹಾರಾಷ್ಟ್ರದ ಮೂಲದಿಂದ ಅಕ್ರಮ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ...

ಕಲಬುರಗಿ| ಟಾಟಾ ವಾಹನ ಡಿಕ್ಕಿ: ಸ್ಥಳದಲ್ಲೇ ಮಹಿಳೆ ಸಾವು

ಕಲಬುರಗಿ: ರಸ್ತೆ ದಾಟುತ್ತಿದ್ದಾಗ ಐಚರ್‌ ನಮೂನೆಯ ಟಾಟಾ ವಾಹನ ಡಿಕ್ಕಿ ಹೊಡೆದು...

ಕಲಬುರಗಿ| ಕಾರಿಗೆ ಡಿಕ್ಕಿಯಾದ ಬೈಕ್; ಬೈಕ್ ಸವಾರ ಸ್ಥಳದಲ್ಲೇ ಸಾವು

ಕಲಬುರಗಿ: ಇನ್ನೋವಾ ಕಾರು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ...

ಕಲಬುರಗಿ| ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಕಲಬುರಗಿ: ವಿದ್ಯುತ್‌ ಸ್ಥಾವರದ ಬೇಲಿ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ...