ಕಲಬುರಗಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅರಣ್ಯ ಇಲಾಖೆಯ ಸಹಾಯಕ ರೇಂಜ್ ಆಫಿಸರ್ ಮೋನಪ್ಪವರು ಭಾಗವಹಿಸಿ, ಪರಿಸರ ಬೆಳೆಸಿ ಉಳಿಸಿಕೊಳ್ಳುವ ವಿಷಯದ ಬಗ್ಗೆ ಮಾತನಾಡಿದರು.
ಅರಣ್ಯ ಇಲಾಖೆ ಇನ್ನೋರ್ವ ಅಧಿಕಾರಿಯಾದ ಪರಸಪ್ಪ ಬೀಟ್ ಅವರು ಕೂಡ ಉಪಸ್ಥಿತರಿದ್ದರು. ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್ ಆರ್ ಪಾಟೀಲ್, ಉಪ ಪ್ರಾಂಶುಪಾಲರಾದ ಡಾ.ಭಾರತಿ ಹರಸೂರ, ಡಾ.ಎಸ್.ಆರ್ ಹೊಟ್ಟೆ, ಡಾ.ಇಂದುಮತಿ ಬಿ ದೇಶಮಾನೆ, ಕಾಲೇಜಿನ ವುಮೇನ್ ಸೆಲ್ ನ ಡಾ.ಸುವರ್ಣ ನಂದ್ಯಾಳ, ಸಂಜೀವ್ ಕುಮಾರ್ ಚೌಹಾನ್, ಮಹಾದೇವಪ್ಪ ರಾಂಪೂರೆಯವರ ಮೊಮ್ಮಗಳಾದ ಪೂಜಾ ರಾಂಪುರೇ ಅತಿಥಿಯಾಗಿ ಆಗಮಿಸಿದ್ದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಸುಜಾತಾ ತೇರದಾಳ ಹಾಗೂ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಭಾಗವಹಿಸಿದ್ದರು.