ಕಲಬುರಗಿ: ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ವಿಭಾಗಕ್ಕೆ ಕಲಬುರಗಿ ಜಿಲ್ಲೆಯ ಉಪನಿರ್ದೇಶಕರಾಗಿ ನೇಮಕಗೊಂಡಿರುವ ಸುರೇಶ್ ಅಕ್ಕಣ್ಣ ಅವರಿಗೆ ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಕಲಬುರಗಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಶಿವರಾಜ್ ನಂದಗಾಂವ, ಪ್ರಧಾನ ಕಾರ್ಯದರ್ಶಿಗಳಾದ ಗುಂಡಯ್ಯ ಸ್ವಾಮಿ, ಕಾರ್ಯಾಧ್ಯಕ್ಷರಾದ ಲಕ್ಷ್ಮಿಕಾಂತ್, ರಾಜ್ಯ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಆನಂದಕರ, ಉಪಾಧ್ಯಕ್ಷರಾದ ಅನಂತ ರಾಜಾಪೂರ, ಎಂ.ವೀರನಗೌಡ, ಮಹಿಳಾ ಪ್ರತಿನಿಧಿಗಳಾದ ಶಿಲ್ಪಾ ಅಲ್ಲದ, ಮೀನಾಕ್ಷಿ ಪಾಟೀಲ್, ಡಾ ಸೇಲ್ವಿ ದೇಶಮಾನೆ, ಸುಧಾ ಸೇರಿದಂತೆ ಎಲ್ಲಾ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರು ಉಪನ್ಯಾಸಕರು ಹಾಜರಿದ್ದರು.