ಕಲಬುರಗಿ: ಇಲ್ಲಿನ ಕೆಜಿಟಿಟಿಐ ಕಾಲೇಜು ಮೈದಾನದಲ್ಲಿ ಬೃಹತ್ ಮಟ್ಟದಲ್ಲಿ ಸಚಿವ ಈಶ್ವರ ಖಂಡ್ರೆ, ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ ನೇತೃತ್ವದಲ್ಲಿ ಬೃಹತ್ ವನಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ದಕ್ಷಿಣ ಮತಕ್ಷೇತ್ರದ ವತಿಯಿಂದ ಪೂರ್ವ ಭಾವಿಸಭೆ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಡಾ. ಶರಣಪ್ರಕಾಶ ಪಾಟೀಲ, ಶರಣಬಸಪ್ಪ ದರ್ಶನಾಪೂರ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಡಾ.ಅಜಯಸಿಂಗ್, ಬಿ.ಆರ್.ಪಾಟೀಲ, ಜಗದೇವ ಗುತ್ತೇದಾರ, ಖನಿಜ್ ಫಾತಿಮಾ, ತಿಪ್ಪಣಪ್ಪ ಕಮಕನೂರ, ಸೇರಿದಂತೆ ಸಚಿವರು, ಶಾಸಕರು, ಜಿಲ್ಲಾಧ್ಯಕ್ಷರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಕ್ಷಿಣ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ ತಾರಫೈಲ್, ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಮಜರ್ ಅಲಮ್ ಖಾನ್, ಮುಖಂಡರುಗಳಾದ ನೀಲಕಂಠರಾವ್ ಮೂಲಗೆ, ಡಾ. ಕಿರಣ್ ದೇಶಮುಖ, ಸಂತೋಷ್ ಪಾಟೀಲ್ ದನ್ನೂರ್, ಚಂದ್ರಿಕಾ ಪರಮೇಶ್ವರ್, ಸೋಮಶೇಖರ್ ಸ್ವಾಮಿ, ದಿಗಂಬರ್ ಬೆಳಮಗಿ, ಬಾಂಬೆ ಲಾಲ್ ಸೇಠ, ಭೀಮರಾವ್ ಕೊಳರ, ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ್ ವೀರ ನಾಯಕ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಕೀಲ್ ಸರಡಗಿ, ಮಹಾನಗರ ಪಾಲಿಕೆ ಸದಸ್ಯೆ ಲತಾ ರಾಥೋಡ್, ದಕ್ಷಿಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ವಾಣಿಶ್ರೀ ಸಗರ್ಕರ್, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಈರಣ್ಣ ಪಾಟೀಲ್ ಜಳಕಿ, ಫಾರೂಕ್ ಮಾನಿಯಾಲ, ಶಿವಾನಂದ ಹೋನಗುಂಟಿ, ಪರಶುರಾಮ್ ನಾಟೇಕರ್, ಅಸ್ಲಾಂ, ರೇಣುಕಾ ಸಿಂಗೆ, ಸಂಗೀತಾ ಪಾಟೀಲ್, ಮಹಾನಗರ ಪಾಲಿಕೆ ಸದಸ್ಯರುಗಳಾದ ನಿಂಗಮ್ಮ ಕಟ್ಟಿಮನಿ, ರೇಣುಕಾ ಹೊಳಕರ್, ಶೇಕ್ ಹುಸೇನ್, ರಾಜವಿ ಜಾನೆ, ಶ್ರೀನಿವಾಸ್ ಲಾಖೆ, ಯುವ ಮುಖಂಡರಾದ ಮಹೇಶ್ ಹೊಸೂರಕರ ದೇವೇಂದ್ರ, ಧರ್ಮರಾಜ ಹೇರೂರ, ರಾಜು ಮಾಳಗಿ, ವಿಘ್ನೇಶ್ ಟೈಗರ್, ಪ್ರಕಾಶ್ ಮಾಳಗಿ, ಅಪ್ಪಾರಾವ್, ಮಲ್ಲಿಕಾರ್ಜುನ್ ನೀಲೂರ್, ಭೀಮಾಶಂಕರ ಪಾಟೀಲ್, ಪ್ರಕಾಶ್ ನಾಗನಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಲ್ಲದೆ, ಈ ಕಾರ್ಯಕ್ರಮಕ್ಕೆ ದಕ್ಷಿಣ ಮತಕ್ಷೇತ್ರದ ವತಿಯಿಂದ ಪಕ್ಷದ ಎಲ್ಲಾ ಮುಖಂಡರು ಕಾರ್ಯಕರ್ತರು ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪಕ್ಷದ ವತಿಯಿಂದ ಮನವಿ ಮಾಡಿಕೊಳ್ಳಲಾಯಿತು.