ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುರುವಾರ ಕಲಬುರಗಿ ತಾಲೂಕಿನ ನಂದೂರ ಕೈಗಾರಿಕೆ ಪ್ರದೇಶದಲ್ಲಿನ ಅಬಕಾರಿ ಇಲಾಖೆಯ ಸೆಕೆಂಡರಿ ಡಿಸ್ಟಲರಿ ಸೆಂಟರ್ ಮತ್ತು ಕೆ.ಎಸ್.ಬಿ.ಸಿ.ಎಲ್ ಡಿಪೋಗೆ ಭೇಟಿ ನೀಡಿ ಅದರ ಕಾರ್ಯವೈಖರಿ ಪರಿಶೀಲಿಸಿದರು.
ಅಬಕಾರಿ ಉಪ ಆಯುಕ್ತ ಡಾ.ಸಂಗಣ್ಣಗೌಡ ಹೊಸಳ್ಳಿ ಅವರಿಂದ ಘಟಕದ ಕಾರ್ಯನಿರ್ವಹಣೆ ಮತ್ತು ರಾಜಸ್ವ ಸಂಗ್ರಹಣೆ ಅಂಶಗಳ ಕುರಿತು ಮಾಹಿತಿ ಪಡೆದುಕೊಂಡರು.
ಇದಕ್ಕೂ ಮುನ್ಮ ಭೂ ಪರಿವರ್ತನೆ ಕೋರಿ ಬಂದಿರುವ ಜಾಫರಾಬಾದ ಸರ್ವೆ ನಂ.58/4, ಇಟಗಾ ಸರ್ವೆ ನಂ.99/5, ಕೋಟನೂರ ‘ಡಿ’ ಸರ್ವೆ ನಂ.38/3, ಸಣ್ಣೂರ ಸರ್ವೆ ನಂ.132/3 ವೀಕ್ಷಿಸಿದರು.
ಕಲಬುರಗಿ ತಹಶೀಲ್ದಾರ ಆನಂದಶೀಲ ಕೆ. ಸೇರಿದಂತೆ ಅಬಕಾರಿ ಇಲಾಖೆಯ ಅಧೀಕ್ಷಕರು, ಉಪಾಧೀಕ್ಷಕರು, ನಿರೀಕ್ಷಕರು ಹಾಗೂ ಇತರೆ ಸಿಬ್ಬಂದಿ ವರ್ಗದವರು ಇದ್ದರು.