ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ತಾಲ್ಲೂಕು ಪಂಚಾಯತ್ ಆವರಣದಲ್ಲಿ ತಾಯಿಯ ಹೆಸರಲ್ಲಿ ಒಂದು ವೃಕ್ಷ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತಾಲ್ಲೂಕ ಪಂಚಾಯತ ಕಾರ್ಯ ನಿರ್ವಹಣಾ ಅಧಿಕಾರಿ ಎಂ.ಡಿ. ಸೈಯದ ಪಟೇಲ ಅವರು ಸಸಿ ನೆಡುವದರ ಮೂಲಕ ವನಮಹೊತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಿರ್ದೇಶಕ ರೇವಣಸಿದ್ದಪ್ಪ ಗೌಡರ, ಲೆಕ್ಕಾಧಿಕಾರಿ ಕು.ಕವಿತಾ, ವ್ಯವಸ್ಥಾಪಕಿ ಬಸಮ್ಮ, ಸಿಬ್ಬಂದಿಗಳಾದ ಅನುಸೂಯ, ಶೋಭಾದೇವಿ, ಕು. ಪದ್ಮವತಿ, ರಾಮಗುಂಡ, ಹಣಮಂತರಾಯ, ಅಶೋಕ, ಕು.ಸದಾಂಹುಸನ್, ಲಕ್ಷ್ಮೀಕಾಂತ ಕೆ.ಮಾನೆ ಮತ್ತು ಸಾಜಿಮೀಯ, ನರೇಗಾ ಐ.ಇ.ಸಿ ಮೋಸಿನ್ ಖಾನ್ ಇದ್ದರು.