ಕಲಬುರಗಿ: ಕೊಡಲಿಯಿಂದ ಬೈಕ್ ಸವಾರನಿಗೆ ದಮ್ಕಿ ಹಾಕಿರುವ ಘಟನೆ ರವಿವಾರ ನಗರದ ಜಗತ್ ಸರ್ಕಲ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಬೈಕ್ ಕಟ್ ಹೊಡೆದಿದ್ದಕ್ಕೆ ಕೊಡಲಿ ತೆಗೆದು ಬೈಕ್ ಸವಾರನಿಗೆ ವ್ಯಕ್ತಿಯೋರ್ವ ಧಮ್ಕಿ ಹಾಕಿದ್ದಾನೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
‘ಇಲ್ಲಿಂದ ಹೋಗು ಇಲ್ಲ ನಿನ್ನ ಇಲ್ಲೆ ಕಲ್ಲಾಸ್ ಮಾಡುತ್ತೇನೆ’, ಎಂದು ಮುಸ್ಲಿಂ ಸಮುದಾಯದ ಬೈಕ್ ಸವಾರನಿಗೆ ಅವಾಚ್ಯ ಶಬ್ದಗಳಿಂದ ಎಚ್ಚರಿಕೆ ಕೊಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಘಟನೆ ಬ್ರಹ್ಮಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬ್ರಹ್ಮಪುರ ಪೊಲೀಸ್ ಠಾಣೆಯ ಪಿಎಸ್ಐ, ಆವಾಜ್ ಹಾಕಿರುವ ವ್ಯಕ್ತಿಯ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ, ಯಾರಾದರೂ ದೂರು ಕೊಟ್ಟರೆ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.