ಕಲಬುರಗಿ: ಕಲಾವಿದ ರೆಹಮಾನ ಪಟೇಲ್ ಅವರನ್ನು 2022–23ನೇ ಸಾಲಿನ 52ನೇ ವಾರ್ಷಿಕ ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಾಂಪ್ರದಾಯಿಕ ಲಘುಚಿತ್ರಕಲೆಯ ಕೃತಿ “ಮಧ್ಯಮದಿ ರಾಗ” ಈ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಪ್ರಶಸ್ತಿಯಲ್ಲಿ 25,000 ನಗದು ಬಹುಮಾನ ಮತ್ತು ಪ್ರಮಾಣಪತ್ರವಿದೆ.
ಪ್ರಶಸ್ತಿ ಪಡೆದ ಚಿತ್ರಕಲಾ ಪ್ರದರ್ಶನವು ಮೇ 23 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ ನಲ್ಲಿ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿಗಳನ್ನು ವಿಜೇತರಿಗೆ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಬೀ. ನೀಲಮ್ಮರವರು ಪತ್ರದಲ್ಲಿ ತಿಳಿಸಿದ್ದಾರೆ.
ರೆಹಮಾನ್ ಪಟೇಲ್ ಅವರು ಕಳೆದ ಎರಡು ದಶಕಗಳಿಂದ ಸುರಪುರ ಲಘುಚಿತ್ರಕಲೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಲಾರೂಪವು 1773 ರಿಂದ 1858ರವರೆಗೆ ಸುರಪುರ ನಾಯಕರ ಆಳ್ವಿಕೆಯಲ್ಲಿ ಅರಳಿದಿತ್ತು.