ಕಲಬುರಗಿ| ಕನ್ನಡ ಪಠ್ಯಬೋಧನೆಯ ಕಾರ್ಯಭಾರ ಹೆಚ್ಚಳಕ್ಕೆ ಅಧ್ಯಾಪಕರ ಸಂಘ ಮನವಿ

Date:

Share post:

ಕಲಬುರಗಿ: ರಾಜ್ಯ ಶಿಕ್ಷಣ ನೀತಿಯನ್ವಯ ಐಚ್ಛಿಕ ಕನ್ನಡ ಪಠ್ಯಬೋಧನೆಯ ಕಾರ್ಯಭಾರದ ಅವಧಿಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘ ದಿಂದ ಗುಲ್ಬರ್ಗಾ ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರಸ್ತುತ ಶೈಕ್ಷಣಿಕ ವರ್ಷ 2024-25ನೇ ಸಾಲಿನಿಂದ ರಾಜ್ಯ ಶಿಕ್ಷಣ ನೀತಿಯನ್ವಯ ಐಚ್ಛಿಕ ಕನ್ನಡ ಪಠ್ಯಬೋಧನೆಯ ಕಾರ್ಯಭಾರವನ್ನು ವಾರಕ್ಕೆ ಐದು ಅವಧಿಯನ್ನು ನಿಗದಿಪಡಿಸಲಾಗಿದೆ. ಆದರೆ ಇದೇ ಶೈಕ್ಷಣಿಕ ವರ್ಷದಲ್ಲಿ ಬೇರೆ ವಿಶ್ವವಿದ್ಯಾಲಯದವರು (ಬೆಂಗಳೂರು, ಮಂಗಳೂರು, ಮೈಸೂರ, ಧಾರವಾಡ, ತುಮಕುರ, ದಾವಣಗೆರೆ) ವಾರಕ್ಕೆ ಆರು ಗಂಟೆಗಳ ಬೋಧನಾ ಅವಧಿಯನ್ನು ನಿಗದಿಪಡಿಸಿದ್ದಾರೆ. ಆದರೆ ಗುಲ್ಬರ್ಗಾ ವಿಶ್ವವಿದ್ಯಾನಿಲಯದಲ್ಲಿ ಒಂದು ಗಂಟೆಯ ಬೋಧನಾ ಅವಧಿ ಕಡಿತಗೊಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಚರಿತ್ರೆಯನ್ನು ಮೂರು ವರ್ಷದ ಸ್ನಾತಕ ಪದವಿ ಅವಧಿಯಲ್ಲಿ ಕಲಿಸಲು ಬೋಧನಾ ಅವಧಿಯು ಸಾಕಾಗುವುದಿಲ್ಲ. ಆದ ಕಾರಣ ಐಚ್ಚಿಕ ಕನ್ನಡದ ಕಾರ್ಯಭಾರವನ್ನು ವಾರಕ್ಕೆ ಐದು ಗಂಟೆಯ ಬದಲಾಗಿ ಆರು ಗಂಟೆಗೆ ಹೆಚ್ಚಿಸಿ ವಿದ್ಯಾರ್ಥಿಗಳ ಕಲಿಕೆಗೆ ಮತ್ತು ಅಧ್ಯಾಪಕರ ಬೋಧನೆಗೆ ಅನುಕೂಲ ಮಾಡಿಕೊಡಬೇಕೆಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಾ.ಖಾಜಾವಲಿ ಈಚನಾಳ, ಡಾ.ಪಂಡಿತ್ ಬಿಕೆ, ಬಸಣ್ಣ ಕಾಗೆ, ಡಾ.ನಾನಗೌಡ ಪಾಟೀಲ್, ಸಿದ್ಧಲಿಂಗ ದಬ್ಬಾ, ಡಾ.ಶರಣಪ್ಪ ಚಕ್ರವರ್ತಿ, ಡಾ.ಎಂ. ಬಿ ಹೂಗಾರ್, ಸುನೀಲ್ ಕುಮಾರ್, ಎಂ.ಎಂ. ಮೇತ್ರಿ ಸೇರಿದಂತೆ ಮತ್ತಿತರರು ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಜನಜಾಗೃತಿಯಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಸಾಧ್ಯ: ಡಾ.ಶರಬಸಪ್ಪ ಕ್ಯಾತನಾಳ

ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ರೋಗಗಳಾದ ಡೆಂಗ್ಯೂ, ಚಿಕೂನ ಗುನ್ಯಾ, ಆನೆಕಾಲು ರೋಗ,...

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....