ಕಲಬುರಗಿ: ಉದ್ಯಾನವನಗಳ ಅಭಿವೃದ್ಧಿಗೆ ಬೇಕಾದ ಅಗತ್ಯ ಸೌಕರ್ಯ ಒದಗಿಸಲು ಸಿದ್ಧ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದ ಎನ್ಜಿಓ ಕಾಲೋನಿ ವಾರ್ಡ ಸಂಖ್ಯೆ 52 ರಲ್ಲಿ ಬರುವ ಶ್ರೀನಗರ ಉದ್ಯಾನವನದಲ್ಲಿ ಶುಕ್ರವಾರ ನಡೆದ ವನಮಹೋತ್ಸವ ಸರಳ ಕಾರ್ಯಕ್ರಮದಲ್ಲಿ ಸಸಿ ನೆಟ್ಟಿ ಬಡಾವಣೆ ನಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸಿದ ಅವರು, ಸುಂದರ ಉದ್ಯಾನವನ ನಿರ್ಮಾಣಕ್ಕಾಗಿ ಬೋರವೆಲ್ ಅಳವಡಿಕೆ, ಯೋಗಾಸನ ಮಾಡುವ ಸಾಧನಗಳು, ಮಕ್ಕಳ ಆಟಿಕೆಗಳು, ವಾಕಿಂಗ್ ಟ್ರ್ಯಾಕ್ ಸೇರಿದಂತೆ ಹೈಮಾಸ್ ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.
ಈಗಾಗಲೇ ಹೈಮಾಸ್ ಅಳವಡಿಕೆಯಾಗಿದ್ದು, ಅದಕ್ಕೆ ಬೇಕಾದ ಬೆಳಕಿನ ವ್ಯವಸ್ಥೆ ಇಷ್ಟರಲ್ಲಿಯೇ ಮಾಡಲಾಗುವುದು. ಬಡಾವಣೆ ನಿವಾಸಿಗಳು ನೆಮ್ಮದಿಯಿಂದ ಇರಲು ಶಾಸಕನಾಗಿ ಅಗತ್ಯ ಸೌಲಭ್ಯ ನೀಡಲು ಬದ್ಧನಾಗಿರುವೆ ಎಂದರು.
ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಹೇರೂರ, ಮುಖಂಡರಾದ ಶರಣಗೌಡ, ಮಲ್ಲೇಶಪ್ಪ ಜಾಂಬಗೌಡ, ಶಾಂತು ಪಾಟೀಲ, ಮಾರುತಿ ಪ್ರೇಸ್ಟಿಜ್ ಫ್ಯ್ಲಾಟ ಓನರ್ಸ ಅಸೋಸಿಯೇಶನ್ ಅಧ್ಯಕ್ಷ ರಮೇಶ್ಚಂದ್ರ ದೇಶಮುಖ, ಉಪಾಧ್ಯಕ್ಷರಾದ ದೀಪಕಕುಮಾರ, ದೇವಿದಾಸ ಅರ್ಥಂ, ಜಯತೀರ್ಥ ಪಾಟೀಲ, ಉಮೇಶ ಕುಲಕರ್ಣಿ, ಜಗನ್ನಾಥ ಉಟಗಿ, ರಾಜಶೇಖರ ಹಾವಪ್ಪಗೋಳ, ಸಂಪತ್ಕುಮಾರ ದೇಶಪಾಂಡೆ, ದೇವಿಂದ್ರಪ್ಪ ಗೋಗಿ ಮುಂತಾದವರಿದ್ದರು.