ಕಲಬುರಗಿ| ಉಜನಿ ಡ್ಯಾಂ ನಿಂದ ಭೀಮಾನದಿಗೆ ನೀರು ಹರಿಸಲು ಡಿಸಿಎಂಗೆ ಜನತಾದಳ ನಿಯೋಗ ಮನವಿ

Date:

Share post:

ಕಲಬುರಗಿ: ಭೀಮಾನದಿಗೆ ಮಹಾರಾಷ್ಟ್ರದ ಉಜನಿ ಡ್ಯಾಂ ನಿಂದ ಕರ್ನಾಟಕದ ಭೀಮಾನದಿಗೆ ನೀರು ಹರಿಸುವ ಬೇಕೆಂದು ಜ್ಯಾತ್ಯಾತೀತ ಜನತಾದಳ (ಜಾ) ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ಅ.ಬಡವಾಳ ಅವರು ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಬೆಂಗಳೂರಿನಲ್ಲಿ ನಿಯೋಗ ಭೇಟಿ ನೀಡಿ ಮನವಿ ಸಲ್ಲಿಸಿದರು.

ಕಲಬುರಗಿ ಮತ್ತು ವಿಜಯಪುರ, ಯಾದಗಿರಿ ಜಿಲ್ಲೆಯ ರೈತರು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ 1976 ರಲ್ಲಿ ಬಚಾವತ್ ಆಯೋಗದ ತೀರ್ಪಿನಂತೆ ಮಹಾರಾಷ್ಟ್ರಕ್ಕೆ 95 ಟಿ.ಎಂ.ಸಿ ಮತ್ತು ಕರ್ನಾಟಕಕ್ಕೆ 15 ಟಿ.ಎಂ.ಸಿ ನೀರು ಹಂಚಿಕೆ ಮಾಡಲಾಗಿತ್ತು. ಮಹಾರಾಷ್ಟ್ರವು ಕೇಂದ್ರ ಜಲಸಂಪನ್ಮೂಲ ಅನುಮತಿಯನ್ನು ಪಡೆಯದೆ 25 ಕಿ.ಮೀ ಸರುಂಗ ಮಾರ್ಗವನ್ನು ಕರೆದು 15 ಟಿ.ಎಂ.ಸಿ ನೀರನ್ನು ಸೇನಾ ನದಿಗೆ ಬಿಟ್ಟುಕೊಳ್ಳುತ್ತಿದೆ. ಕರ್ನಾಟಕ ಭಾಗದ ರೈತರ ಜೀವನಾಡಿಯಾದ ಭೀಮಾನದಿ ಬೇಸಿಗೆ ಕಾಲದಲ್ಲಿ ಬತ್ತಿಹೋಗಿ ರೈತರು ಕಂಗಾಲಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೃಷಿ ಮತ್ತು ವ್ಯವಸಾಯ ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಅಹಕಾರವನ್ನು ಅನುಭವಿಸುತ್ತಿದ್ದಾರೆ. ಹಾಗೂ ಬೇಸಿಗೆ ಕಾಲದಲ್ಲಿ ಜಲಮೂಲಗಳು ಬತ್ತಿಹೋಗುತ್ತವೆ. ಇಲ್ಲಿನ ಜನರು ನೀರಿಗಾಗಿ ಪರದಾಡುವಂತಾಗುತ್ತದೆ. ಮನವಿಯನ್ನು ಪರಿಗಣಿಸಿ ಮಹಾರಾಷ್ಟ್ರದ ಸರ್ಕಾರದ ಜೊತೆ ಒಪ್ಪಂದ ಮೂಲಕ ಭೀಮಾ ನದಿಗೆ ನೀರು ಹರಿಸುವಂತೆ ಕ್ರಮ ತೆಗೆದುಕೊಂಡು ನಮ್ಮ ಭಾಗದ ಜನ-ಜಾನುವಾರು ಹಾಗೂ ರೈತರಿರ ಹಿತ ಕಾಪಾಡಬೇಕೆಂದು ಮನವಿ ಮಾಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ ಅವರು ಮನವಿ ಸ್ವೀಕರಿಸಿ ಸಮಸ್ಯೆ ಇತ್ಯಾರ್ಥದ ಮಾಡುವ ಕುರಿತು ಭರವಸೆ ನೀಡಿದ್ದಾರೆ ಎಂದು ನಿಯೋಗ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಸೋಮಶೇಖರ ದೇಶಮುಖ, ಸುನೀಲ ಹೊಸಮನಿ, ನಾಗಣ್ಣ ವಾರದ ಬೈಲಪ್ಪ ಪಟ್ಟೇದಾರ, ಮಾರುತಿ ಚವ್ಹಾಣ ಸೇರಿದಂತೆ ಇತರರು ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಅಕ್ರಮ ಗಾಂಜಾ ಮಾರಾಟ; 48 ಸಾವಿರ ಮೌಲ್ಯದ 3 ಕೆಜಿ ಗಾಂಜಾ ಜಪ್ತಿ

ಕಲಬುರಗಿ: ಮಹಾರಾಷ್ಟ್ರದ ಮೂಲದಿಂದ ಅಕ್ರಮ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ...

ಕಲಬುರಗಿ| ಟಾಟಾ ವಾಹನ ಡಿಕ್ಕಿ: ಸ್ಥಳದಲ್ಲೇ ಮಹಿಳೆ ಸಾವು

ಕಲಬುರಗಿ: ರಸ್ತೆ ದಾಟುತ್ತಿದ್ದಾಗ ಐಚರ್‌ ನಮೂನೆಯ ಟಾಟಾ ವಾಹನ ಡಿಕ್ಕಿ ಹೊಡೆದು...

ಕಲಬುರಗಿ| ಕಾರಿಗೆ ಡಿಕ್ಕಿಯಾದ ಬೈಕ್; ಬೈಕ್ ಸವಾರ ಸ್ಥಳದಲ್ಲೇ ಸಾವು

ಕಲಬುರಗಿ: ಇನ್ನೋವಾ ಕಾರು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ...

ಕಲಬುರಗಿ| ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಕಲಬುರಗಿ: ವಿದ್ಯುತ್‌ ಸ್ಥಾವರದ ಬೇಲಿ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ...